<p><strong>ಬೆಂಗಳೂರು</strong>: ಮಾದಕ ವಸ್ತು ಮಾರಾಟ ಆರೋಪ ಸಾಬೀತಾದ ಕಾರಣ ಮೂವರು ಅಪರಾಧಿಗಳಿಗೆ 14 ವರ್ಷಗಳ ಜೈಲು ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿ ನಗರದ 33ನೇ ಸಿಸಿಎಚ್ ನ್ಯಾಯಾಲಯ ನ್ಯಾಯಾಧೀಶ ವಿಜಯ ದೇವರಾಜ ಅರಸು ಆದೇಶ ಹೊರಡಿಸಿದ್ದಾರೆ.</p>.<p>ಜೆ. ಜೆ ನಗರ ನಿವಾಸಿಗಳಾದ ಸೈಯದ್ ಯಾರಬ್, ಶಾಬಾಜ್ ಖಾನ್, ಇಮ್ರಾನ್ ಪಾಷಾ ಶಿಕ್ಷೆಗೊಳಗಾದವರು. ಬಂಧಿತ ಮತ್ತೊಬ್ಬ ಆರೋಪಿಯ ಸಾಕ್ಷ್ಯಾಧಾರ ಸಿಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. </p>.<p>ಗುಡ್ಡದಹಳ್ಳಿ ಮುಖ್ಯರಸ್ತೆಯ ಈದ್ಗಾ ಮೈದಾನದ ಬಳಿ 2023 ಜ.ರಂದು ಸಿಸಿಬಿ ಸಂಘಟಿತ ಅಪರಾಧ ದಳದ ಇನ್ಸ್ಪೆಕ್ಟರ್ ಎಸ್.ಮಹದೇವಸ್ವಾಮಿ ನೇತೃತ್ವದ ಆರೋಪಿಗಳನ್ನು ಬಂಧಿಸಿತ್ತು. </p>.<p>ಸೈಯದ್, ಶಾಬಾಜ್, ಇಮ್ರಾನ್ ಬಳಿ ಮಾರಾಟಕ್ಕೆ ತಂದಿದ್ದ 1 ಕೆ.ಜಿ. ಗಾಂಜಾ, 22 ಎಲ್ಎಸ್ಡಿ ಸ್ಟ್ರಿಪ್ಸ್, 25 ಗ್ರಾಂ ಮೆಥಾಮಫೆಟಮಿನ್ ಪತ್ತೆಯಾಗಿತ್ತು. ಆರೋಪಿಗಳು ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರ ಸಮೇತ ಎನ್ಡಿಪಿಎಸ್ ಕಾಯಿದೆ ಅನ್ವಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಲಾಗಿದೆ.<br><br>ಸರ್ಕಾರಿ ಅಭಿಯೋಜಕ ಕೆ.ವಿ.ಅಶ್ವತ್ಥನಾರಾಯಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಾದಕ ವಸ್ತು ಮಾರಾಟ ಆರೋಪ ಸಾಬೀತಾದ ಕಾರಣ ಮೂವರು ಅಪರಾಧಿಗಳಿಗೆ 14 ವರ್ಷಗಳ ಜೈಲು ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿ ನಗರದ 33ನೇ ಸಿಸಿಎಚ್ ನ್ಯಾಯಾಲಯ ನ್ಯಾಯಾಧೀಶ ವಿಜಯ ದೇವರಾಜ ಅರಸು ಆದೇಶ ಹೊರಡಿಸಿದ್ದಾರೆ.</p>.<p>ಜೆ. ಜೆ ನಗರ ನಿವಾಸಿಗಳಾದ ಸೈಯದ್ ಯಾರಬ್, ಶಾಬಾಜ್ ಖಾನ್, ಇಮ್ರಾನ್ ಪಾಷಾ ಶಿಕ್ಷೆಗೊಳಗಾದವರು. ಬಂಧಿತ ಮತ್ತೊಬ್ಬ ಆರೋಪಿಯ ಸಾಕ್ಷ್ಯಾಧಾರ ಸಿಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. </p>.<p>ಗುಡ್ಡದಹಳ್ಳಿ ಮುಖ್ಯರಸ್ತೆಯ ಈದ್ಗಾ ಮೈದಾನದ ಬಳಿ 2023 ಜ.ರಂದು ಸಿಸಿಬಿ ಸಂಘಟಿತ ಅಪರಾಧ ದಳದ ಇನ್ಸ್ಪೆಕ್ಟರ್ ಎಸ್.ಮಹದೇವಸ್ವಾಮಿ ನೇತೃತ್ವದ ಆರೋಪಿಗಳನ್ನು ಬಂಧಿಸಿತ್ತು. </p>.<p>ಸೈಯದ್, ಶಾಬಾಜ್, ಇಮ್ರಾನ್ ಬಳಿ ಮಾರಾಟಕ್ಕೆ ತಂದಿದ್ದ 1 ಕೆ.ಜಿ. ಗಾಂಜಾ, 22 ಎಲ್ಎಸ್ಡಿ ಸ್ಟ್ರಿಪ್ಸ್, 25 ಗ್ರಾಂ ಮೆಥಾಮಫೆಟಮಿನ್ ಪತ್ತೆಯಾಗಿತ್ತು. ಆರೋಪಿಗಳು ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರ ಸಮೇತ ಎನ್ಡಿಪಿಎಸ್ ಕಾಯಿದೆ ಅನ್ವಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಲಾಗಿದೆ.<br><br>ಸರ್ಕಾರಿ ಅಭಿಯೋಜಕ ಕೆ.ವಿ.ಅಶ್ವತ್ಥನಾರಾಯಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>