ಬೆಂಗಳೂರು: ಇದೇ 18ರಂದು 14 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದರಿಂದ ಬುಧವಾರ ಮತ್ತು ಗುರುವಾರ ಸಮೀಕ್ಷೆ ಮತ್ತು ಮತದಾರರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಪ್ರಕಟಿಸುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು. ಆಯೋಗದಿಂದ ಪ್ರಮಾಣಿಕರಣ ಪಡೆದ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬಹುದಾಗಿದೆ ಎಂದರು.