‘ಸಿಪಿಐಎಂ ಮುಖಂಡರಾದ ಕೆ.ಎನ್.ಉಮೇಶ್, ಲೀಲಾವತಿ, ವರಲಕ್ಷ್ಮಿ, ಗೌರಮ್ಮ, ಗೌರಿ ಕೃಷ್ಣ ಹಾಗೂ ಇತರರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಪುರಭವನ ಎದುರು ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ್ದ ಜಬೀವುಲ್ಲಾ, ಇರ್ಷಾದ್ ಪಾಷ್ ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.