ನಿಸರ್ಗ ಲೇಔಟ್ನ ಸುಶೀಲಮ್ಮ ಅವರನ್ನು ಕೈ- ಕಾಲು ಕತ್ತರಿಸಿ ಹತ್ಯೆ ಮಾಡಲಾಗಿದೆ. ಮೃತದೇಹವನ್ನು ಡ್ರಮ್ನಲ್ಲಿ ಇರಿಸಿ ಆರೋಪಿ ಪರಾರಿಯಾಗಿದ್ದ. ಭಾನುವಾರ ಮೃತದೇಹ ಪತ್ತೆಯಾಗಿತ್ತು.
ಸ್ಥಳಕ್ಕೆ ಬಂದ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಸುತ್ತಾಡಿದ್ದ ಶ್ವಾನ, ಸಮೀಪದಲ್ಲಿದ್ದ ಆರೋಪಿ ಮನೆಗೆ ಹೋಗಿ ನಿಂತಿತ್ತು. ಮನೆಯಲ್ಲಿದ್ದ ಆರೋಪಿ ಹೊರಗೆ ಬರುತ್ತಿದ್ದಂತೆ ಆತನ ಬಳಿ ಹೋಗಿತ್ತು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.