<p><strong>ಬೆಂಗಳೂರು:</strong> ರೆಮ್ಡಿಸಿವಿರ್ ಚುಚ್ಚುಮದ್ದಿನ ಖಾಲಿ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣ ತುಂಬಿಸಿ ‘ನಕಲಿ ರೆಮ್ಡಿಸಿವಿರ್’ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.</p>.<p>‘ಮೈಸೂರು ರಸ್ತೆಯ ಎಸ್. ರವಿಕುಮಾರ್ (36), ನಾಗವಾರ ಮುಖ್ಯರಸ್ತೆಯ ಎನ್. ಮುನಿರಾಜು (30) ಹಾಗೂ ಕಾಮಾಕ್ಷಿಪಾಳ್ಯದ ಕೃಷ್ಣ (31) ಬಂಧಿತರು. ಅವರಿಂದ 9 ನಕಲಿ ರೆಮ್ಡಿಸಿವಿರ್ ಬಾಟಲಿ ಹಾಗೂ ₹ 55 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಹೊಸೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಆಸ್ಪತ್ರೆ ಹಾಗೂ ಕೂಡ್ಲುವಿನಲ್ಲಿರುವ ಮಾತೃ ಆಸ್ಪತ್ರೆಯ ಹೌಸ್ ಕೀಪಿಂಗ್ ವ್ಯವಸ್ಥಾಪಕನಾಗಿದ್ದ ಕೃಷ್ಣ ಜೊತೆ ರವಿಕುಮಾರ್ ಹಾಗೂ ಮುನಿರಾಜು ಒಡನಾಟ ಹೊಂದಿದ್ದರು. ಆಸ್ಪತ್ರೆಯಲ್ಲಿ ಬಳಸಿ ಎಸೆಯುತ್ತಿದ್ದ ರೆಮ್ಡಿಸಿವಿರ್ ಬಾಟಲಿಗಳನ್ನು ಕೃಷ್ಣ ಮೂಲಕ ಆರೋಪಿಗಳು ಪಡೆಯುತ್ತಿದ್ದರು.’</p>.<p>’ಅದೇ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣವನ್ನು ತುಂಬುತ್ತಿದ್ದರು. ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರಿಗೆ, ಅಸಲಿ ರೆಮ್ಡಿಸಿವಿರ್ ಎಂದು ಹೇಳಿ ದುಬಾರಿಗೆ ಬೆಲೆಗೆ ನಕಲಿ ಚುಚ್ಚುಮದ್ದು ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<p><strong>ಆಸ್ಪತ್ರೆಯಲ್ಲಿ ಕೆಲಸ:</strong> ‘ಬಂಧಿತ ಆರೋಪಿ ರವಿಕುಮಾರ್, ಈ ಹಿಂದೆ ವಿಕ್ಟೋರಿಯಾ, ಅಪೊಲೊ, ರಾಮಕೃಷ್ಣ ಹಾಗೂ ಶ್ರೀ ವೆಂಕಟೇಶ್ವರ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮುನಿರಾಜು, ಓವಮ್ ವುಮೆನ್ ಮತ್ತು ಚೈಲ್ಡ್ ಕೇರ್ ಆಸ್ಪತ್ರೆಯ ಮಾರ್ಕೇಟಿಂಗ್ ವ್ಯವಸ್ಥಾಪಕನಾಗಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ನಕಲಿ ರೆಮ್ಡಿಸಿವಿರ್ ಚುಚ್ಚುಮದ್ದುಗಳನ್ನು ಆರೋಪಿಗಳು ಹಲವರಿಗೆ ನೀಡಿದ್ದಾರೆ. ಕೆಲ ಸೋಂಕಿತರ ಚಿಕಿತ್ಸೆಗೆ ಅದನ್ನೇ ಬಳಸಿರುವ ಮಾಹಿತಿಯೂ ಇದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರೆಮ್ಡಿಸಿವಿರ್ ಚುಚ್ಚುಮದ್ದಿನ ಖಾಲಿ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣ ತುಂಬಿಸಿ ‘ನಕಲಿ ರೆಮ್ಡಿಸಿವಿರ್’ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.</p>.<p>‘ಮೈಸೂರು ರಸ್ತೆಯ ಎಸ್. ರವಿಕುಮಾರ್ (36), ನಾಗವಾರ ಮುಖ್ಯರಸ್ತೆಯ ಎನ್. ಮುನಿರಾಜು (30) ಹಾಗೂ ಕಾಮಾಕ್ಷಿಪಾಳ್ಯದ ಕೃಷ್ಣ (31) ಬಂಧಿತರು. ಅವರಿಂದ 9 ನಕಲಿ ರೆಮ್ಡಿಸಿವಿರ್ ಬಾಟಲಿ ಹಾಗೂ ₹ 55 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಹೊಸೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಆಸ್ಪತ್ರೆ ಹಾಗೂ ಕೂಡ್ಲುವಿನಲ್ಲಿರುವ ಮಾತೃ ಆಸ್ಪತ್ರೆಯ ಹೌಸ್ ಕೀಪಿಂಗ್ ವ್ಯವಸ್ಥಾಪಕನಾಗಿದ್ದ ಕೃಷ್ಣ ಜೊತೆ ರವಿಕುಮಾರ್ ಹಾಗೂ ಮುನಿರಾಜು ಒಡನಾಟ ಹೊಂದಿದ್ದರು. ಆಸ್ಪತ್ರೆಯಲ್ಲಿ ಬಳಸಿ ಎಸೆಯುತ್ತಿದ್ದ ರೆಮ್ಡಿಸಿವಿರ್ ಬಾಟಲಿಗಳನ್ನು ಕೃಷ್ಣ ಮೂಲಕ ಆರೋಪಿಗಳು ಪಡೆಯುತ್ತಿದ್ದರು.’</p>.<p>’ಅದೇ ಬಾಟಲಿಗಳಲ್ಲಿ ಎನ್.ಎಸ್. ದ್ರಾವಣವನ್ನು ತುಂಬುತ್ತಿದ್ದರು. ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರಿಗೆ, ಅಸಲಿ ರೆಮ್ಡಿಸಿವಿರ್ ಎಂದು ಹೇಳಿ ದುಬಾರಿಗೆ ಬೆಲೆಗೆ ನಕಲಿ ಚುಚ್ಚುಮದ್ದು ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<p><strong>ಆಸ್ಪತ್ರೆಯಲ್ಲಿ ಕೆಲಸ:</strong> ‘ಬಂಧಿತ ಆರೋಪಿ ರವಿಕುಮಾರ್, ಈ ಹಿಂದೆ ವಿಕ್ಟೋರಿಯಾ, ಅಪೊಲೊ, ರಾಮಕೃಷ್ಣ ಹಾಗೂ ಶ್ರೀ ವೆಂಕಟೇಶ್ವರ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮುನಿರಾಜು, ಓವಮ್ ವುಮೆನ್ ಮತ್ತು ಚೈಲ್ಡ್ ಕೇರ್ ಆಸ್ಪತ್ರೆಯ ಮಾರ್ಕೇಟಿಂಗ್ ವ್ಯವಸ್ಥಾಪಕನಾಗಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ನಕಲಿ ರೆಮ್ಡಿಸಿವಿರ್ ಚುಚ್ಚುಮದ್ದುಗಳನ್ನು ಆರೋಪಿಗಳು ಹಲವರಿಗೆ ನೀಡಿದ್ದಾರೆ. ಕೆಲ ಸೋಂಕಿತರ ಚಿಕಿತ್ಸೆಗೆ ಅದನ್ನೇ ಬಳಸಿರುವ ಮಾಹಿತಿಯೂ ಇದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>