‘ಮೌರ್ಯ ವೃತ್ತದಲ್ಲಿ ನ.22ರಿಂದ 26ರವರೆಗೆ ಧರಣಿ ಮಾಡಿದ್ದಾಗ, ನೇಮಕಾತಿ ಆದೇಶ ಪತ್ರ ನೀಡಲು ಆದೇಶ ನೀಡುತ್ತೇನೆ ಎಂದು ಸರ್ಕಾರದ ಆಗಿನ ಮುಖ್ಯಕಾರ್ಯದರ್ಶಿಯವರು ಭರವಸೆ ನೀಡಿದ್ದರು. ಅವರ ಮಾತಿನಂತೆ ಧರಣಿ ವಾಪಸ್ ತೆಗೆದುಕೊಂಡಿದ್ದೆವು. ಆದರೆ, ನಮ್ಮ ಬೇಡಿಕೆಯನ್ನು ಈವರೆಗೂ ಸರ್ಕಾರ ಈಡೇರಿಸಿಲ್ಲ’ ಎಂದು ಆಕಾಂಕ್ಷಿ ಶರತ್ ಹೇಳಿದರು.