‘ಸ್ಮಾರ್ಟ್ ಸಿಟಿ’ ಪ್ರಾಜೆಕ್ಟ್ ಸಲಹೆಗಾರ ಪ್ರೊ. ಎಂ.ಎನ್ ಶ್ರೀಹರಿ ಮಾತನಾಡಿ, ‘ಯುವಿಸಿಇಯಂತಹ ಪ್ರತಿಷ್ಠಿತ ಕಾಲೇಜನ್ನು ಸ್ವಯಂ ಹಣಕಾಸು ಸಂಸ್ಥೆಯಾಗಿ ಬದಲಾಯಿಸಿದರೆ, ಕೇವಲ ಹಣವುಳ್ಳವರು ಮಾತ್ರ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣ ಆರ್ಥಿಕ ಸ್ವಾಯತ್ತತೆಯ ವಿರುದ್ಧದ ಹೋರಾಟವು ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರು, ಪೋಷಕರನ್ನು ಒಳಗೊಳ್ಳಬೇಕು’ ಎಂದು ಸಲಹೆ ನೀಡಿದರು.