ಖಾಸಗಿ ಕಂಪನಿ ಉದ್ಯೋಗಿ ಆಕಾಶ್ ದಂಡ ಪಾವತಿಸಿದವರು. ಸೆ. 3ರಂದು ಸಂಜೆ 6 ಗಂಟೆ ಸುಮಾರಿಗೆ ಆಕಾಶ್ (25) ಸ್ನೇಹಿತನ ಜೊತೆ ತಲ್ಲಘಟ್ಟಪುರದಿಂದ ನಗರದ ಕಡೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ರಘುವನಹಳ್ಳಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯ ಎಎಸ್ಐ ಶಿವಣ್ಣ ಅವರು ಆಕಾಶ್ನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆಕಾಶ್ ಮದ್ಯ ಸೇವಿಸಿರುವುದು ಆಲ್ಕೋಮೀಟರ್ ಯಂತ್ರದಿಂದ ದೃಢಪಟ್ಟಿತ್ತು. ಹೀಗಾಗಿ, ಆಕಾಶ್ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪರವಾನಗಿ ಇಲ್ಲದಿರುವುದು, ಹೆಲ್ಮೆಟ್ ಧರಿಸದಿರುವ (ಚಾಲಕ ಹಾಗೂ ಹಿಂಬದಿ ಸವಾರ) ಅಪರಾಧಕ್ಕೆ ನೋಟಿಸ್ ನೀಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಸೂಚಿಸಿದ್ದರು.