ಹೊಯ್ಸಳ ವೃತ್ತ ಬಳಿ ರಾಘವೇಂದ್ರ ಎಂಬುವವರು ಗೋದಾಮು ನಿರ್ಮಿಸಿ ಬಟ್ಟೆ ಹಾಗೂ ಪ್ಲಾಸ್ಟಿಕ್ ಸಾಮಗ್ರಿ ವ್ಯಾಪಾರ ಮಾಡುತ್ತಿದ್ದರು. ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಇದೇ ಗೋದಾಮಿಗೆ 2022ರಲ್ಲಿ ಬಿಬಿಎಂಪಿಯವರು ಬೀಗ ಜಡಿದಿದ್ದರು. ಕೆಲ ತಿಂಗಳ ನಂತರ ಪುನಃ ಗೋದಾಮು ತೆರೆದು ವ್ಯಾಪಾರ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದರು.