ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ‘ದೇವಸ್ಥಾನದ ಒಳಭಾಗದಲ್ಲೇ ಕೊಠಡಿ ಇದೆ. ಕೊಠಡಿಗೆ ಹೋಗಿದ್ದ ನಾಗರಾಜಯ್ಯ, ಪ್ರಸಾದ ತಯಾರಿಸಲು ಸಿದ್ಧರಾಗಿದ್ದರು. ಅಡುಗೆ ಅನಿಲ ಸಿಲಿಂಡರ್ ಆನ್ ಮಾಡಿದ್ದರು. ಆದರೆ, ಅಕ್ಕ–ಪಕ್ಕದಲ್ಲಿ ಲೈಟರ್ ಹಾಗೂ ಬೆಂಕಿಪೊಟ್ಟಣ ಇರಲಿಲ್ಲ. ಅದಕ್ಕಾಗಿ ಹುಡುಕಾಟ ಆರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.