<p><strong>ಬೆಂಗಳೂರು</strong>: ‘ಲಗೋರಿ, ಗಾಳಿಪಟ ಹಾರಿಸುವಂತಹ ಗ್ರಾಮೀಣ ಆಟಗಳು ಆಧುನಿಕ ನಗರ ಜೀವನದ ಮಕ್ಕಳಿಗೆ ಅಪರೂಪ. ಸುಗ್ಗಿ ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ನಾಡಿನ ಶ್ರೀಮಂತ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ನೈಜ ಪರಿಚಯ ವಿಶೇಷ ಅನುಭವ ನೀಡಿದೆ’ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.</p>.<p>ದೊಡ್ಡಬ್ಯಾಲಕೆರೆಯ ಯೂರೋಕಿಡ್ಸ್ ಪ್ರೀ ಸ್ಕೂಲ್ನಲ್ಲಿ ಈಚೆಗೆ ಆಯೋಜಿಸಿದ್ದ ಸಂಕ್ರಾಂತಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶಾಲೆಯ ಆವರಣದಲ್ಲಿ ಗ್ರಾಮೀಣ ವಾತಾವರಣ ನಿರ್ಮಿಸಿರುವುದು ಬಾಲ್ಯದ ಹಳ್ಳಿ ಬದುಕು ನೆನಪಿಸಿತು’ ಎಂದರು.</p>.<p>‘ಕಾಲಾನುಸಾರ ಜಾನಪದ ಬದುಕಿನ ಮಜಲು ಮತ್ತು ಗ್ರಾಮೀಣ ಆಚರಣೆಗಳು ಮಾಯವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ನಮ್ಮ ನೆಲಮೂಲ ಆಚರಣೆಗಳ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.</p>.<p>ಇದೇ ವೇಳೆ ಶಾಲೆಯ ಮಕ್ಕಳು ಜನಪದ ನೃತ್ಯ ಪ್ರದರ್ಶಿಸಿದರು. ಜನಪದ ಗೀತೆಗಳ ಮೂಲಕ ಅಪ್ಪಗೆರೆ ತಿಮ್ಮರಾಜು ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಲಗೋರಿ, ಗಾಳಿಪಟ ಹಾರಿಸುವಂತಹ ಗ್ರಾಮೀಣ ಆಟಗಳು ಆಧುನಿಕ ನಗರ ಜೀವನದ ಮಕ್ಕಳಿಗೆ ಅಪರೂಪ. ಸುಗ್ಗಿ ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ನಾಡಿನ ಶ್ರೀಮಂತ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ನೈಜ ಪರಿಚಯ ವಿಶೇಷ ಅನುಭವ ನೀಡಿದೆ’ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.</p>.<p>ದೊಡ್ಡಬ್ಯಾಲಕೆರೆಯ ಯೂರೋಕಿಡ್ಸ್ ಪ್ರೀ ಸ್ಕೂಲ್ನಲ್ಲಿ ಈಚೆಗೆ ಆಯೋಜಿಸಿದ್ದ ಸಂಕ್ರಾಂತಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶಾಲೆಯ ಆವರಣದಲ್ಲಿ ಗ್ರಾಮೀಣ ವಾತಾವರಣ ನಿರ್ಮಿಸಿರುವುದು ಬಾಲ್ಯದ ಹಳ್ಳಿ ಬದುಕು ನೆನಪಿಸಿತು’ ಎಂದರು.</p>.<p>‘ಕಾಲಾನುಸಾರ ಜಾನಪದ ಬದುಕಿನ ಮಜಲು ಮತ್ತು ಗ್ರಾಮೀಣ ಆಚರಣೆಗಳು ಮಾಯವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ನಮ್ಮ ನೆಲಮೂಲ ಆಚರಣೆಗಳ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.</p>.<p>ಇದೇ ವೇಳೆ ಶಾಲೆಯ ಮಕ್ಕಳು ಜನಪದ ನೃತ್ಯ ಪ್ರದರ್ಶಿಸಿದರು. ಜನಪದ ಗೀತೆಗಳ ಮೂಲಕ ಅಪ್ಪಗೆರೆ ತಿಮ್ಮರಾಜು ರಂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>