<p><strong>ಬೆಂಗಳೂರು:</strong> ಬಿಬಿಎಂಪಿಯ ಎಂಟು ವಲಯಗಳಲ್ಲಿ ನಾಗರಿಕರಿಗೆ ಅಡತಡೆಯಿಲ್ಲದ, ಅನುಕೂಲಕರ ಪಾದಚಾರಿ ಮಾರ್ಗ ವ್ಯವಸ್ಥೆ ಕಲ್ಪಿಸಲು ಪಾದಚಾರಿ ಮಾರ್ಗದ ಒತ್ತುವರಿ, ಅನಧಿಕೃತ ಜಾಹೀರಾತುಗಳನ್ನು ತೆರವು ಮಾಡಲಾಯಿತು.</p>.<p>ಪೂರ್ವ ವಲಯದಲ್ಲಿ ಪುಲಕೇಶಿನಗರ ವಿಭಾಗದ ವಾರ್ಡ್ 31ರ ಕುಶಾಲ್ ನಗರದ ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಯಿತು. ಸಿ.ವಿ ರಾಮನ್ ನಗರ ವಿಭಾಗದ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.</p>.<p>ಪಶ್ಚಿಮ ವಲಯದ ಗೋವಿಂದರಾಜನಗರ ಉಪವಿಭಾಗ ವ್ಯಾಪ್ತಿಯ ವಾರ್ಡ್ 104ರ ಗೋವಿಂದರಾಜನಗರ ಮತ್ತು ವಾರ್ಡ್ 125ರ ಮಾರೇನಹಳ್ಳಿ ವಾರ್ಡ್ ವ್ಯಾಪ್ತಿಯ ಸಿ.ಎಚ್.ಬಿ.ಎಸ್ ಬಡಾವಣೆ, 8ನೇ ಮುಖ್ಯರಸ್ತೆ ಎಂ.ಸಿ ಬಡಾವಣೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸರ್ವಿಸ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು.</p>.<p>ದಕ್ಷಿಣ ವಲಯದ ಕಲಾಸಿಪಾಳ್ಯದ ಕುಂಬಾರಗುಂಡಿಯಲ್ಲಿ, ಬಿಟಿಎಂ ಲೇಔಟ್ನ 7ನೇ ಮುಖ್ಯರಸ್ತೆ, ಹೊಸಕೆರೆ ಹಳ್ಳಿ ಮುಖ್ಯರಸ್ತೆ, ಜಯನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಶ್ರೀನಗರದಲ್ಲಿ, ನ್ಯೂ ಟಿಂಬರ್ ಯಾರ್ಡ್ ಲೇ ಔಟ್ ನ 2ನೇ ಅಡ್ಡರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪದ್ಮನಾಭನಗರ ವಿಭಾಗದ ವಾರ್ಡ್ 166, ಕರಿಸಂದ್ರದಲ್ಲಿ ಸಂಗೀತ ಪ್ಯಾಕೇಜ್ ಎಂಬ ಅಂಗಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಅಂಗಡಿ ಮಾಲೀಕರಿಗೆ ₹10 ಸಾವಿರ ದಂಡ ವಿಧಿಸಿ, ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಯಿತು.</p>.<p>ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ಉಪವಿಭಾಗದಲ್ಲಿ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.</p>.<p>ಮಹಾದೇವಪುರ ವಲಯದ ದೊಡ್ಡನೆಕ್ಕುಂದಿ, ಬಿ.ನಾರಾಯಣಪುರ ವಾರ್ಡ್, ಬ್ರೂಕ್ ಫೀಲ್ಡ್ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪಟ್ಟಂದೂರು, ಎಇಸಿಎಸ್ ಬಡಾವಣೆ, ಕಲ್ಕೆರೆ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ನಡೆಸಲಾಯಿತು.</p>.<p>ಯಲಹಂಕ ವಲಯದ ಬೆಟ್ಟಹಳ್ಳಿ ಲೇಔಟ್ನ ಜಿಕೆವಿಕೆ ಹಾರ್ಟಿಕಲ್ಚರ್ ಜಂಕ್ಷನ್, ಕೆಂಪೇಗೌಡ ವಾರ್ಡ್ 1, ಎಂ.ಎಸ್ ಪಾಳ್ಯದ ವಾರ್ಡ್ 3, ಕಾಫಿ ಬೋರ್ಡ್ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಅಮೃತಹಳ್ಳಿಯ ಮುಖ್ಯರಸ್ತೆಯಲ್ಲಿ ಅನಧಿಕೃತ ಒ.ಎಫ್.ಸಿ ಕೇಬಲ್ ತೆರವುಗೊಳಿಸಲಾಯಿತು.</p>.<p>ರಾಜರಾಜೇಶ್ವರಿ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಶಂಕರನಾಗ್ ವೃತ್ತದಿಂದ (ಬಿಬಿಎಂಪಿ ಕಚೇರಿ ಹತ್ತಿರ) ಸ್ಯಾಟಲೈಟ್ ಕ್ಲಬ್ ಸರ್ಕಲ್ ಕೊಮ್ಮಘಟ್ಟ ಮುಖ್ಯರಸ್ತೆವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಬಿಡಿಎ ಕಾಂಪ್ಲೆಕ್ಸ್ ಅನ್ನಪೂರ್ಣೇಶ್ವರಿ ನಗರದ ದೇವಸ್ಥಾನದ ರಸ್ತೆಯಿಂದ ಮುದ್ದಿನಪಾಳ್ಯ ಮುಖ್ಯರಸ್ತೆವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. </p>.<p>ಅಂಗಡಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಕಂಡುಬಂದಿದ್ದು, ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು, 26 ಪ್ರಕರಣಗಳಿಂದ ₹31,600 ದಂಡ ವಸೂಲಿ ಮಾಡಲಾಯಿತು.</p>.<p> <strong>₹62500 ದಂಡ ವಸೂಲು</strong></p><p> ರಸ್ತೆ ಪಕ್ಕದಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ಕಸ ಎಸೆಯುತ್ತಿರುವ 25 ಪ್ರಕರಣಗಳಿಂದ ಒಟ್ಟು ₹62500 ದಂಡ ವಸೂಲು ಮಾಡಲಾಯಿತು. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಯಲಚೇನಹಳ್ಳಿ ವಸಂತಪುರ ವ್ಯಾಪ್ತಿ ರಾಜ್ಯೋತ್ಸವನಗರ ಹಾಗೂ ಉತ್ತರಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ ಎಂಟು ವಲಯಗಳಲ್ಲಿ ನಾಗರಿಕರಿಗೆ ಅಡತಡೆಯಿಲ್ಲದ, ಅನುಕೂಲಕರ ಪಾದಚಾರಿ ಮಾರ್ಗ ವ್ಯವಸ್ಥೆ ಕಲ್ಪಿಸಲು ಪಾದಚಾರಿ ಮಾರ್ಗದ ಒತ್ತುವರಿ, ಅನಧಿಕೃತ ಜಾಹೀರಾತುಗಳನ್ನು ತೆರವು ಮಾಡಲಾಯಿತು.</p>.<p>ಪೂರ್ವ ವಲಯದಲ್ಲಿ ಪುಲಕೇಶಿನಗರ ವಿಭಾಗದ ವಾರ್ಡ್ 31ರ ಕುಶಾಲ್ ನಗರದ ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಯಿತು. ಸಿ.ವಿ ರಾಮನ್ ನಗರ ವಿಭಾಗದ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.</p>.<p>ಪಶ್ಚಿಮ ವಲಯದ ಗೋವಿಂದರಾಜನಗರ ಉಪವಿಭಾಗ ವ್ಯಾಪ್ತಿಯ ವಾರ್ಡ್ 104ರ ಗೋವಿಂದರಾಜನಗರ ಮತ್ತು ವಾರ್ಡ್ 125ರ ಮಾರೇನಹಳ್ಳಿ ವಾರ್ಡ್ ವ್ಯಾಪ್ತಿಯ ಸಿ.ಎಚ್.ಬಿ.ಎಸ್ ಬಡಾವಣೆ, 8ನೇ ಮುಖ್ಯರಸ್ತೆ ಎಂ.ಸಿ ಬಡಾವಣೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸರ್ವಿಸ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು.</p>.<p>ದಕ್ಷಿಣ ವಲಯದ ಕಲಾಸಿಪಾಳ್ಯದ ಕುಂಬಾರಗುಂಡಿಯಲ್ಲಿ, ಬಿಟಿಎಂ ಲೇಔಟ್ನ 7ನೇ ಮುಖ್ಯರಸ್ತೆ, ಹೊಸಕೆರೆ ಹಳ್ಳಿ ಮುಖ್ಯರಸ್ತೆ, ಜಯನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಶ್ರೀನಗರದಲ್ಲಿ, ನ್ಯೂ ಟಿಂಬರ್ ಯಾರ್ಡ್ ಲೇ ಔಟ್ ನ 2ನೇ ಅಡ್ಡರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪದ್ಮನಾಭನಗರ ವಿಭಾಗದ ವಾರ್ಡ್ 166, ಕರಿಸಂದ್ರದಲ್ಲಿ ಸಂಗೀತ ಪ್ಯಾಕೇಜ್ ಎಂಬ ಅಂಗಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಅಂಗಡಿ ಮಾಲೀಕರಿಗೆ ₹10 ಸಾವಿರ ದಂಡ ವಿಧಿಸಿ, ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಯಿತು.</p>.<p>ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ಉಪವಿಭಾಗದಲ್ಲಿ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.</p>.<p>ಮಹಾದೇವಪುರ ವಲಯದ ದೊಡ್ಡನೆಕ್ಕುಂದಿ, ಬಿ.ನಾರಾಯಣಪುರ ವಾರ್ಡ್, ಬ್ರೂಕ್ ಫೀಲ್ಡ್ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪಟ್ಟಂದೂರು, ಎಇಸಿಎಸ್ ಬಡಾವಣೆ, ಕಲ್ಕೆರೆ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ನಡೆಸಲಾಯಿತು.</p>.<p>ಯಲಹಂಕ ವಲಯದ ಬೆಟ್ಟಹಳ್ಳಿ ಲೇಔಟ್ನ ಜಿಕೆವಿಕೆ ಹಾರ್ಟಿಕಲ್ಚರ್ ಜಂಕ್ಷನ್, ಕೆಂಪೇಗೌಡ ವಾರ್ಡ್ 1, ಎಂ.ಎಸ್ ಪಾಳ್ಯದ ವಾರ್ಡ್ 3, ಕಾಫಿ ಬೋರ್ಡ್ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಅಮೃತಹಳ್ಳಿಯ ಮುಖ್ಯರಸ್ತೆಯಲ್ಲಿ ಅನಧಿಕೃತ ಒ.ಎಫ್.ಸಿ ಕೇಬಲ್ ತೆರವುಗೊಳಿಸಲಾಯಿತು.</p>.<p>ರಾಜರಾಜೇಶ್ವರಿ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಶಂಕರನಾಗ್ ವೃತ್ತದಿಂದ (ಬಿಬಿಎಂಪಿ ಕಚೇರಿ ಹತ್ತಿರ) ಸ್ಯಾಟಲೈಟ್ ಕ್ಲಬ್ ಸರ್ಕಲ್ ಕೊಮ್ಮಘಟ್ಟ ಮುಖ್ಯರಸ್ತೆವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಬಿಡಿಎ ಕಾಂಪ್ಲೆಕ್ಸ್ ಅನ್ನಪೂರ್ಣೇಶ್ವರಿ ನಗರದ ದೇವಸ್ಥಾನದ ರಸ್ತೆಯಿಂದ ಮುದ್ದಿನಪಾಳ್ಯ ಮುಖ್ಯರಸ್ತೆವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. </p>.<p>ಅಂಗಡಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಕಂಡುಬಂದಿದ್ದು, ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು, 26 ಪ್ರಕರಣಗಳಿಂದ ₹31,600 ದಂಡ ವಸೂಲಿ ಮಾಡಲಾಯಿತು.</p>.<p> <strong>₹62500 ದಂಡ ವಸೂಲು</strong></p><p> ರಸ್ತೆ ಪಕ್ಕದಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ಕಸ ಎಸೆಯುತ್ತಿರುವ 25 ಪ್ರಕರಣಗಳಿಂದ ಒಟ್ಟು ₹62500 ದಂಡ ವಸೂಲು ಮಾಡಲಾಯಿತು. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಯಲಚೇನಹಳ್ಳಿ ವಸಂತಪುರ ವ್ಯಾಪ್ತಿ ರಾಜ್ಯೋತ್ಸವನಗರ ಹಾಗೂ ಉತ್ತರಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>