ಪಶ್ಚಿಮ ಬಂಗಾಳದ ಸುಲೇಮಾನ್ ಶೇಕ್(39) ಅವರು ಹೆಬ್ಬಾಳ, ನಾಗವಾರ ಸುತ್ತಮುತ್ತ ತ್ಯಾಜ್ಯ ಆಯ್ದು ಜೀವನ ನಡೆಸುತ್ತಿದ್ದಾರೆ. ನ.3ರಂದು ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ ಕಪ್ಪು ಬಣ್ಣದ ಚೀಲವೊಂದು ಅವರಿಗೆ ಸಿಕ್ಕಿದೆ. ಆ ಚೀಲದಲ್ಲಿ ಈ ಕರೆನ್ಸಿಗಳು ಪತ್ತೆಯಾಗಿವೆ. ಅದರ ಬಗ್ಗೆ ತಿಳಿಯದ ಸುಲೇಮಾನ್ ಶೇಕ್, ತನಗೆ ಆಶ್ರಯ ನೀಡಿದ್ದ ಟೇಕೆದಾಸ್ ಎಂಬುವರಿಗೆ ಮಾಹಿತಿ ನೀಡಿದ್ದರು. ಬಳಿಕ ಟೇಕೆದಾಸ್ ಆ ಚೀಲ ಪರಿಶೀಲಿಸಿದರು. ಸ್ಥಳೀಯರಾದ ಆರ್.ಕಲೀಂ ಉಲ್ಲಾಗೂ ಮಾಹಿತಿ ನೀಡಿದ್ದರು. ಕರೀಂ ಅವರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಕೂಡಲೇ ನೋಟುಗಳ ಬಗ್ಗೆ ಪರಿಶೀಲಿಸುವಂತೆ ಹೆಬ್ಬಾಳ ಪೊಲೀಸರಿಗೆ ಸೂಚಿಸಿದ್ದರು. ಬಳಿಕ ಹೆಬ್ಬಾಳ ಪೊಲೀಸರು ಪರಿಶೀಲನೆ ನಡೆಸಿದ್ದರು.