ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ವಿವಿ ಪುರದಲ್ಲಿ ಬೀದಿ ಆಹಾರ ಸವಿದ ವಿದೇಶಾಂಗ ಸಚಿವ ಜೈಶಂಕರ್

Last Updated 13 ಆಗಸ್ಟ್ 2022, 14:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬೆಂಗಳೂರಿನಲ್ಲಿ ಬೀದಿ ಬದಿ ಆಹಾರ ಸವಿದು ಗಮನ ಸೆಳೆದಿದ್ದಾರೆ.

ಸಚಿವ ಅಶ್ವತ್ಥ್ ನಾರಾಯಣ ಜೊತೆ ನಗರದ ವಿವಿ ಪುರದ ಸಜ್ಜನ್ ರಾವ್ ಸರ್ಕಲ್‌ಗೆತೆರಳಿ ಅಲ್ಲಿನ ಜನಪ್ರಿಯ ಬೀದಿ ಬದಿಯ ಆಹಾರ ಸವಿದರು. ಅವರು ಚಾಟ್ ಮಸಾಲಾ, ಗೋಬಿ ಹಾಗೂ ಪಾವ್ ಬಾಜಿ ಸವಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಜೈಶಂಕರ್ ಅವರು, ‘ಬೆಂಗಳೂರಿನ ಭೇಟಿ ನಿಮಿತ್ತ ಅಲ್ಲಿನ ಜನಪ್ರಿಯಬೀದಿ ಬದಿ ಆಹಾರ ಸವಿದೆ. ರುಚಿ ಎನ್ನುವುದಕ್ಕೆ ಬೆಂಗಳೂರಿನ ತಿಂಡಿಗಳು ನಿಜವಾದ ಸತ್ಕಾರ ನೀಡಿದಂತಾಯಿತು. ಬೆಂಗಳೂರು ಪಾಕಶಾಲೆ ಇತಿಹಾಸದ ಉಗ್ರಾಣವಾಗಿದೆ’ ಎಂದು ಮೆಚ್ಚಿಕೊಂಡಿದ್ದಾರೆ.

ಇದೇ ವೇಳೆ ಜನಪ್ರಿಯ ಫುಡ್ ಬ್ಲಾಗರ್ ಆದ ಕೃಪಾಲ್ ಅಮಣ್ಣ ಅವರು ಕೂಡ ಹಾಜರಿದ್ದು ವಿವಿ ಪುರಂನ ಜನಪ್ರಿಯ ತಿಂಡಿಗಳನ್ನು ಸಚಿವರಿಗೆ ಪರಿಚಯಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT