ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯದಲ್ಲಿ ಶ್ರೇಷ್ಠಮಟ್ಟದ ಜ್ಞಾನ ಪಡೆಯುವುದರ ಜೊತೆಗೆ, ವಿಷಯ ವಿಶ್ಲೇಷಣೆಯಲ್ಲಿ ಸೃಜನಶೀಲತೆ ಪಡೆಯಬೇಕು, ಜೊತೆಗೆ ಅತ್ಯುತ್ತಮ ಸಂವಹನ ಕೌಶಲ ಪಡೆಯುವಂತಹ ಶಿಕ್ಷಣ ನೀಡಬೇಕು. ಮುಖ್ಯವಾಗಿ, ಪರಸ್ಪರರ ನಡುವೆ ಸೌಹಾರ್ದ ಸಂಬಂಧ ಪಡೆಯುವ ಮನೋಧರ್ಮ ಬೆಳೆಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯ ಮೂಡಿಸುವ ಶಿಕ್ಷಣ ನೀಡುವಂತಾಗಬೇಕು ಎಂದು ವೇದಿಕೆ ಹೇಳಿದೆ.