ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಗೆ ಕೈ ಕೊಟ್ಟು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕೇರಳಿಗ ಬೆಂಗಳೂರಲ್ಲಿ ಬಂಧನ!

ಒಂದು ವರ್ಷದ ಹಿಂದೆ ವಂಚಿಸಿ ಹೋಗಿದ್ದವ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ವಶಕ್ಕೆ
Published 9 ಆಗಸ್ಟ್ 2023, 4:49 IST
Last Updated 9 ಆಗಸ್ಟ್ 2023, 4:49 IST
ಅಕ್ಷರ ಗಾತ್ರ

ದೇವನಹಳ್ಳಿ: ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ‌ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದ ಆರೋಪಿ ಅಜಿನಾಫ್ ಎಂಬುವವನನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳವಾರ ರಾತ್ರಿ ಕೇರಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ಅಜಿನಾಫ್, ಕೇರಳ ರಾಜ್ಯದ ಪನಮರಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ವರ್ಷದ ಹಿಂದೆ 19 ವರ್ಷದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ.

ಯುವತಿಯನ್ನು ವಿವಿಧೆಡೆ ಕರೆದೊಯ್ದು ಚಿತ್ರಹಿಂಸೆ ನೀಡಿದ ದೂರಿನ ಮೇರೆಗೆ ಪನಮರಂ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನಲೆಯಲ್ಲಿ ಆರೋಪಿತ ಪಿಲಕಾವ್ ವಿಳಂಗುಂಪುರಂನ ಅಜಿನಾಫ್ (24) ವಿದೇಶಕ್ಕೆ ಹಾರಿದ್ದ.

ಪ್ರಕರಣ ಸಂಬಂಧ ಎಲ್ಲವೂ ತಣ್ಣಗಾದ ನಂತರ, ಒಂದು ವರ್ಷ ಬಿಟ್ಟು ಪುನಃ ಕೇರಳಕ್ಕೆ ಹೋಗಲು ಆರೋಪಿಯು ವಿದೇಶದಿಂದ ನೇರಾವಾಗಿ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಾಗ, ಇಮಿಗ್ರೇಷನ್ ಸಮಯದಲ್ಲಿ ಪರಿಶೀಲನೆ ವೇಳೆ ಪ್ರಕರಣ ಕುರಿತು ತಿಳಿದ ಅಧಿಕಾರಿಗಳು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT