‘ನಗರದ ಮುರುಗನ್ ಕೆಫೆ ಸೇರಿದಂತೆ ವಿವಿಧ ಹೋಟೆಲ್ಗಳ ಮಾಲೀಕರನ್ನು ಸಂಪರ್ಕಿಸಿ,ನಮ್ಮ ಯೋಜನೆಗೆ ಸಹಕರಿಸಲು ಕೋರಿದ್ದೇವೆ. ನಮ್ಮ ಫ್ರಿಜ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿನಿತ್ಯ ಊಟ– ತಿಂಡಿಯನ್ನು ತಂದಿಡಲಿದ್ದಾರೆ.ಫ್ರಿಜ್ನಲ್ಲಿ ಪಲಾವು, ಉಪ್ಪಿಟ್ಟು-ಕೇಸರಿಬಾತ್, ಬೇಳೆ ಬಾತ್, ವಾಂಗಿಬಾತ್, ಪೂರಿ, ಚಪಾತಿ, ಪಲ್ಯ, ಚಟ್ನಿ, ಸಾಂಬಾರು ಸೇರಿದಂತೆ ವಿವಿಧ ಆಹಾರ ಇರುತ್ತವೆ. ಕೆಲವೊಮ್ಮೆ ಅನ್ನ-ಸಾಂಬಾರ್ ಕೂಡ ಇಡಲಾಗುತ್ತದೆ’ ಎಂದುಯುವ ಚಿಂತನಾ ಫೌಂಡೇಷನ್ ಮುಖ್ಯಸ್ಥೆ ಅನುಪಮಾ ಮಾಹಿತಿ ನೀಡಿದರು.