ಗೋಡೆ ಮೇಲೆ ಇರುವವರು ಯಾರ್ಯಾರು?: ನಾಡಪ್ರಭು ಕೆಂಪೇಗೌಡ, ಸರ್.ಎಂ.ವಿಶ್ವೇಶ್ವರಯ್ಯ, ಸಿ.ವಿ.ರಾಮನ್, ಕುವೆಂಪು, ಕೃಷ್ಣದೇವರಾಯ, ಡಾ.ರಾಜಕುಮಾರ್, ಪುನೀತ್ ರಾಜ ಕುಮಾರ್, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜಾರ್ಜ್ ಫರ್ನಾಂಡಿಸ್,
ಎಸ್.ಎಲ್.ಭೈರಪ್ಪ, ರಾಮಪ್ರಸಾದ್ ಬಿಸ್ಮಿಲ್, ಸುಶ್ರುತ, ಲಲಿತಾದಿತ್ಯ ಮುಕ್ತಾಪೀಡ, ಮಹಾರಾಜ್ ರಂಜೀತ್ ಸಿಂಗ್, ಡಾ.ಬಾಬಾಸಾಹೇಬ್ ಅಂಬೇಡ್ಕರ್, ವಿಕ್ರಂ ಸಾರಾಬಾಯಿ, ಚಂದ್ರಶೇಖರ್ ಆಜಾದ್ ಸೇರಿ ವಿವಿಧ ಮಹ ನೀಯರ ಭಾವಚಿತ್ರ ಬಿಡಿಸಲಾಗಿದೆ. ಸದ್ಯ 40 ಚಿತ್ರಗಳನ್ನು ಸಂಪೂರ್ಣವಾಗಿ ಬಿಡಿಸಲಾಗಿದೆ. ಇನ್ನೂ 18 ಚಿತ್ರಗಳನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಗೋಡೆಗಳ ಮೇಲೆ ಚಿತ್ರಿಸಲು ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ. ಸಿ.ವಿ. ರಾಮನ್ನಗರದ ಕ್ಷೇತ್ರದ ಶಾಸಕಎಸ್.ರಘು ಯೋಜನೆಗೆ ಆರ್ಥಿಕ ಸಹಾಯ ಮಾಡಿದ್ದಾರೆ ಎಂದು ಸಮೀರ್ ಕುಲಕರ್ಣಿ ತಿಳಿಸಿದರು.