<p><strong>ಬೆಂಗಳೂರು</strong>: ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ರೌಡಿ ಸೈಯದ್ ಅಸ್ಗರ್ ಅಲಿಯಾಸ್ ಅಜ್ಜುನನ್ನು (34) ಜಗಜೀವನರಾಮ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ಪಾದರಾಯನಪುರ ನಿವಾಸಿ ಸೈಯದ್ ಅಸ್ಗರ್, ಹಲವು ವರ್ಷಗಳಿಂದ ಅಪರಾಧ ಕೃತ್ಯ ಎಸಗುತ್ತಿದ್ದ. ಕೆಲ ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಇತ್ತೀಚೆಗೆ ಒಡಿಶಾಕ್ಕೆ ಹೋಗಿದ್ದ ಆರೋಪಿ, ಅಲ್ಲಿಂದ ಗಾಂಜಾ ತೆಗೆದುಕೊಂಡು ನಗರಕ್ಕೆ ಬಂದಿದ್ದ. ಮಧ್ಯವರ್ತಿಗಳ ಮೂಲಕ ಗಾಂಜಾ ಮಾರಲು ತಯಾರಿ ನಡೆಸಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ 22 ಕೆ.ಜಿ 928 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ಜಗಜೀವನರಾಮ್ ನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಅಸ್ಗರ್ ಹೆಸರಿತ್ತು. ಈತನ ಮೇಲೆ ನಿಗಾ ಇರಿಸಲಾಗಿತ್ತು. ಗಾಂಜಾ ಮಾರಾಟದ ವೇಳೆ ಪೊಲೀಸರು ತನ್ನನ್ನು ಬಂಧಿಸಬಹುದೆಂದು ಆರೋಪಿ ಅಂದುಕೊಂಡಿದ್ದ. ಹೀಗಾಗಿ, ಒಡಿಶಾದಿಂದ ತಂದಿದ್ದ ಗಾಂಜಾವನ್ನು ಗುರಪ್ಪನಪಾಳ್ಯದಲ್ಲಿರುವ ಅತ್ತೆ ಮನೆಯಲ್ಲಿ ಇರಿಸಿದ್ದ.’</p>.<p>‘ಆರೋಪಿಯನ್ನು ಬಂಧಿಸಿದಾಗ ಕೇವಲ 2 ಕೆ.ಜಿ ಗಾಂಜಾ ಮಾತ್ರ ಸಿಕ್ಕಿತ್ತು. ವಿಚಾರಣೆ ನಡೆಸಿದಾಗ, ಅತ್ತೆ ಮನೆಯಲ್ಲಿ ಗಾಂಜಾ ಇರಿಸಿದ್ದ ಸಂಗತಿ ತಿಳಿಯಿತು. ನಂತರ, ಮನೆಯಲ್ಲಿ ಶೋಧ ನಡೆಸಿ ಉಳಿದ ಗಾಂಜಾವನ್ನು ಜಪ್ತಿ ಮಾಡಲಾಯತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ರೌಡಿ ಸೈಯದ್ ಅಸ್ಗರ್ ಅಲಿಯಾಸ್ ಅಜ್ಜುನನ್ನು (34) ಜಗಜೀವನರಾಮ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ಪಾದರಾಯನಪುರ ನಿವಾಸಿ ಸೈಯದ್ ಅಸ್ಗರ್, ಹಲವು ವರ್ಷಗಳಿಂದ ಅಪರಾಧ ಕೃತ್ಯ ಎಸಗುತ್ತಿದ್ದ. ಕೆಲ ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಇತ್ತೀಚೆಗೆ ಒಡಿಶಾಕ್ಕೆ ಹೋಗಿದ್ದ ಆರೋಪಿ, ಅಲ್ಲಿಂದ ಗಾಂಜಾ ತೆಗೆದುಕೊಂಡು ನಗರಕ್ಕೆ ಬಂದಿದ್ದ. ಮಧ್ಯವರ್ತಿಗಳ ಮೂಲಕ ಗಾಂಜಾ ಮಾರಲು ತಯಾರಿ ನಡೆಸಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ 22 ಕೆ.ಜಿ 928 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ಜಗಜೀವನರಾಮ್ ನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಅಸ್ಗರ್ ಹೆಸರಿತ್ತು. ಈತನ ಮೇಲೆ ನಿಗಾ ಇರಿಸಲಾಗಿತ್ತು. ಗಾಂಜಾ ಮಾರಾಟದ ವೇಳೆ ಪೊಲೀಸರು ತನ್ನನ್ನು ಬಂಧಿಸಬಹುದೆಂದು ಆರೋಪಿ ಅಂದುಕೊಂಡಿದ್ದ. ಹೀಗಾಗಿ, ಒಡಿಶಾದಿಂದ ತಂದಿದ್ದ ಗಾಂಜಾವನ್ನು ಗುರಪ್ಪನಪಾಳ್ಯದಲ್ಲಿರುವ ಅತ್ತೆ ಮನೆಯಲ್ಲಿ ಇರಿಸಿದ್ದ.’</p>.<p>‘ಆರೋಪಿಯನ್ನು ಬಂಧಿಸಿದಾಗ ಕೇವಲ 2 ಕೆ.ಜಿ ಗಾಂಜಾ ಮಾತ್ರ ಸಿಕ್ಕಿತ್ತು. ವಿಚಾರಣೆ ನಡೆಸಿದಾಗ, ಅತ್ತೆ ಮನೆಯಲ್ಲಿ ಗಾಂಜಾ ಇರಿಸಿದ್ದ ಸಂಗತಿ ತಿಳಿಯಿತು. ನಂತರ, ಮನೆಯಲ್ಲಿ ಶೋಧ ನಡೆಸಿ ಉಳಿದ ಗಾಂಜಾವನ್ನು ಜಪ್ತಿ ಮಾಡಲಾಯತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>