ಒಂದು ತಿಂಗಳ ಸಂಗೀತೋತ್ಸವದಲ್ಲಿ ಪ್ರವೀಣ್ ಗೋಡ್ಖಿಂಡಿ, ಸ್ಫೂರ್ತಿ ರಾವ್, ಹರೀಶ್ ಶಿವರಾಮಕೃಷ್ಣನ್, ರಂಜನಿ ಮತ್ತು ಗಾಯತ್ರಿ, ದುಶ್ಯಂತ್ ಶ್ರೀಧರ್, ಮಲ್ಲಾಡಿ ಸಹೋದರರು, ಸಿಕ್ಕಿಲ್ ಗುರುಚರಣ್, ತ್ರಿಚೂರು ಸಹೋದರರು, ಪ್ರಿಯಾ ಸಹೋದರಿಯರು, ಬೆಂಗಳೂರು ಎಸ್. ಶಂಕರ್, ವಾರಿಜಾಶ್ರೀ, ಜಯತೀರ್ಥ ಮೇವುಂಡಿ, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ರಯಾಸ್ ಮತ್ತು ಹಫೀಜ್ ಬಾಲೇಖಾನ್, ವಿದ್ಯಾಭೂಷಣ, ವೆಂಕಟೇಶ್ ಕುಮಾರ್, ಶಿವಮಣಿ, ಯು. ರಾಜೇಶ್ ಮತ್ತು ಹರ್ಮೀತ್, ಎಂ.ಎಸ್. ಶೀಲಾ, ಸುಧಾ ರಘುನಾಥನ್ ಸೇರಿ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಗೂ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.