<p><strong>ಬೆಂಗಳೂರು:</strong> ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಐಟಿಸಿ ನಡುವೆ ಒಪ್ಪಂದವಾಗಿದ್ದು, ಶೀಘ್ರವೇ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ತ್ಯಾಜ್ಯಮುಕ್ತ ಕ್ಯಾಂಪಸ್ ಆಗಲಿದೆ.</p>.<p>ವಿಶ್ವವಿದ್ಯಾನಿಲಯದ ವಿವಿಧ ಕಚೇರಿಗಳು ಹಾಗೂ ವಿಭಾಗಗಳಲ್ಲಿರುವ ಹಳೆಯ ಕಾಗದಗಳು, ಪುಸ್ತಕಗಳು, ದಿನ ಪತ್ರಿಕೆಗಳು, ಪ್ಲಾಸ್ಟಿಕ್, ಇ-ತ್ಯಾಜ್ಯ ಮುಂತಾದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗುವುದು. ತಿಂಗಳಿಗೊಮ್ಮೆ ಇದನ್ನು ಐಟಿಸಿ ಸಂಸ್ಥೆ ಕೊಂಡೊಯ್ದು, ಹೊಸ ಕಾಗದ, ಫೈಲ್ಗಳು ಹಾಗೂ ಇನ್ನಿತರ ಬಳಕೆಯಾಗುವ ವಸ್ತುಗಳನ್ನು ಬದಲಿಯಾಗಿ ನೀಡಲಿದೆ.</p>.<p>ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಎಸ್.ರಾಜೇಂದ್ರ ಪ್ರಸಾದ್,'ಒಂದು ಟನ್ ಹಳೆ ಕಾಗದ ಪುನರ್ಬಳಕೆಯಿಂದ ಶೇ 70ರಷ್ಟು ಕಚ್ಚಾವಸ್ತು, ಶೇ 60ರಷ್ಟು ಕಲ್ಲಿದ್ದಲು ಹಾಗೂ ಶೇ 43ರಷ್ಟು ಶಕ್ತಿ ಉಳಿತಾಯವಾಗುತ್ತದೆ. ಕಾಗದವನ್ನು 5ರಿಂದ 7 ಬಾರಿ ಮರುಬಳಕೆ ಮಾಡಬಹುದು. ಒಂದು ಟನ್ ಮರುಬಳಕೆ ಕಾಗದ 17 ಮರಗಳ ಜೀವ ಉಳಿಸುತ್ತದೆ. ಇದರಿಂದ 250 ಪೌಂಡ್ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತದೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಐಟಿಸಿ ನಡುವೆ ಒಪ್ಪಂದವಾಗಿದ್ದು, ಶೀಘ್ರವೇ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ತ್ಯಾಜ್ಯಮುಕ್ತ ಕ್ಯಾಂಪಸ್ ಆಗಲಿದೆ.</p>.<p>ವಿಶ್ವವಿದ್ಯಾನಿಲಯದ ವಿವಿಧ ಕಚೇರಿಗಳು ಹಾಗೂ ವಿಭಾಗಗಳಲ್ಲಿರುವ ಹಳೆಯ ಕಾಗದಗಳು, ಪುಸ್ತಕಗಳು, ದಿನ ಪತ್ರಿಕೆಗಳು, ಪ್ಲಾಸ್ಟಿಕ್, ಇ-ತ್ಯಾಜ್ಯ ಮುಂತಾದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗುವುದು. ತಿಂಗಳಿಗೊಮ್ಮೆ ಇದನ್ನು ಐಟಿಸಿ ಸಂಸ್ಥೆ ಕೊಂಡೊಯ್ದು, ಹೊಸ ಕಾಗದ, ಫೈಲ್ಗಳು ಹಾಗೂ ಇನ್ನಿತರ ಬಳಕೆಯಾಗುವ ವಸ್ತುಗಳನ್ನು ಬದಲಿಯಾಗಿ ನೀಡಲಿದೆ.</p>.<p>ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಎಸ್.ರಾಜೇಂದ್ರ ಪ್ರಸಾದ್,'ಒಂದು ಟನ್ ಹಳೆ ಕಾಗದ ಪುನರ್ಬಳಕೆಯಿಂದ ಶೇ 70ರಷ್ಟು ಕಚ್ಚಾವಸ್ತು, ಶೇ 60ರಷ್ಟು ಕಲ್ಲಿದ್ದಲು ಹಾಗೂ ಶೇ 43ರಷ್ಟು ಶಕ್ತಿ ಉಳಿತಾಯವಾಗುತ್ತದೆ. ಕಾಗದವನ್ನು 5ರಿಂದ 7 ಬಾರಿ ಮರುಬಳಕೆ ಮಾಡಬಹುದು. ಒಂದು ಟನ್ ಮರುಬಳಕೆ ಕಾಗದ 17 ಮರಗಳ ಜೀವ ಉಳಿಸುತ್ತದೆ. ಇದರಿಂದ 250 ಪೌಂಡ್ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತದೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>