ಗ್ರಾಮದ ಸರ್ವೆ ನಂ.75/4ರಲ್ಲಿ 21 ಎಕರೆ 19 ಗುಂಟೆ ಜಾಗವು ಸರ್ಕಾರಿ ಗೋಮಾಳ ಜಮೀನು ಎಂದು ದಾಖಲೆಗಳಲ್ಲಿ ಬರುತ್ತಿದ್ದರೂ ಈ ಪೈಕಿ 11 ಎಕರೆ ಜಾಗವನ್ನು ಮುನಿರಾಜು ರೆಡ್ಡಿ ಬಿನ್ ಲೇಟ್ ರಾಮರೆಡ್ಡಿ, ಪದ್ಮಮ್ಮ ಕೋಂ ಮುನಿರಾಜು ರೆಡ್ಡಿ, ಎಂ.ಪ್ರೇಮಾ ಬಿನ್ ಲೇಟ್ ಮುನಿರಾಜು ರೆಡ್ಡಿ, ರಘು ಎಂ. ಬಿನ್ ಮುನಿರಾಜು ರೆಡ್ಡಿ, ನರಸಿಂಹ ರೆಡ್ಡಿ ಬಿನ್ ಮುನಿರಾಜು ರೆಡ್ಡಿ ಎಂಬುವರು ಆಂಧ್ರ ಮೂಲಕ ಚಿತ್ತೂರ ವೆಂಕಟೇಶ್ವರ ಬಿನ್ ರಾಚಯ್ಯ ಎಂಬುವರಿಗೆ ಇದೇ ಜನವರಿ 6ರಂದು ಅಕ್ರಮವಾಗಿ ಗಾಂಧಿನಗರದ (ಕಾಚರಕನಹಳ್ಳಿ) ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.