ಕರ್ನಾಟಕ ಸಹಿಷ್ಣುತೆಯ ತವರು. ಜೈನ, ಶೈವ ಧರ್ಮ ಪ್ರವರ್ಧಮಾನಕ್ಕೆ ಕಾರಣವಾಗಿದ್ದು, ರಾಮಾನುಜಾಚಾರ್ಯರಿಗೆ ಆಶ್ರಯ ನೀಡಿದ್ದು ಕರ್ನಾಟಕ. ಬಸವ ತತ್ವ ಆಧಾರದಲ್ಲಿ ಜನ್ಮ ತಾಳಿದ ವೀರಶೈವ ಪರಂಪರೆ, ಶರಣ ಚಳವಳಿ ಕ್ರಾಂತಿಗೆ ನಾಂದಿ ಹಾಡಿತು. ಇಸ್ಲಾಂ, ಕ್ರೈಸ್ತರ ಸಹಬಾಳ್ವೆಗೂ ಪ್ರತೀಕವಾಗಿದೆ. ಅಂತಹ ವಾತಾವರಣವನ್ನು ಉಳಿಸಿಕೊಳ್ಳಬೇಕು, ಮತ್ತೆ ಸಹಿಷ್ಣತೆಯ ನೆಲೆಯಾಗಿಸಬೇಕು. ಪಂಪ ಮಹಾಕವಿ ಆಶಯದಂತೆ ‘ಮನುಷ್ಯ ಕುಲ ತಾನೊಂದೆ ವಲಂ’ ಎನ್ನುವುದು ಮೂಲಮಂತ್ರವಾಗಬೇಕು ಎಂದು ಹೇಳಿದರು.