<p><strong>ಬೆಂಗಳೂರು: </strong>ಕಾರ್ಮಿಕ ಇಲಾಖೆಯಿಂದ ಬಡವರಿಗೆ ವಿತರಿಸಲು ನೀಡಿರುವ ಆಹಾರ ಸಾಮಗ್ರಿಗಳ ಕಿಟ್ ಅನ್ನು ₹ 200ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದರು.</p>.<p>‘ನಾನು ಪ್ರತಿನಿಧಿಸುವ ಮನೋರಾಯನ ಪಾಳ್ಯ ವಾರ್ಡ್ನಲ್ಲಿ ಆಹಾರ ಸಾಮಗ್ರಿಯ ಕಿಟ್ ನೀಡುವುದಾಗಿ ಜನರಿಂದ ಕೆಲವರು ₹ 200 ಪಡೆದು ಟೋಕನ್ ನೀಡಿದ್ದಾರೆ. ಅವರು ನೀಡಿರುವ ಕಿಟ್ಗಳಲ್ಲಿ ಕಾರ್ಮಿಕ ಇಲಾಖೆಯ ಮುದ್ರೆ ಇದೆ. ಸರ್ಕಾರದ ಕಿಟ್ ಯಾರದ್ದೋ ಕೈ ಸೇರಿದ್ದು ಹೇಗೆ’ ಎಂದು ವಾಜಿದ್ ಪ್ರಶ್ನಿಸಿದರು.</p>.<p>‘ಈ ಆಹಾರದ ಕಿಟ್ಗಳ ವಿತರಣೆಯನ್ನು ತಡೆದಿರುವ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ: </strong>ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತ ಸರ್ಫರಾಜ್ ಖಾನ್, ‘ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮುಕ್ತಾಯವಾಗಿ ಅನೇಕ ದಿನಗಳೇ ಕಳೆದಿವೆ. ಈ ವಾರ್ಡ್ನಲ್ಲಿ ಈ ಕಿಟ್ಗಳು ಹೇಗೆ ತಲುಪಿದವೋ ತಿಳಿಯದು. ನಾವು ಕಿಟ್ ವಿತರಿಸುವಾಗ ಪ್ರತಿಯೊಬ್ಬ ಕಾರ್ಮಿಕರ ಆಧಾರ್ ನಂಬರ್ ಪಡೆದು ದೃಢೀಕರಿಸಿಕೊಂಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತ್ರ ಕಿಟ್ ವಿತರಿಸಲಾಗಿದೆ. ಕಿಟ್ ವಿತರಣೆ ಹೊಣೆಯನ್ನು ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾರ್ಮಿಕ ಇಲಾಖೆಯಿಂದ ಬಡವರಿಗೆ ವಿತರಿಸಲು ನೀಡಿರುವ ಆಹಾರ ಸಾಮಗ್ರಿಗಳ ಕಿಟ್ ಅನ್ನು ₹ 200ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದರು.</p>.<p>‘ನಾನು ಪ್ರತಿನಿಧಿಸುವ ಮನೋರಾಯನ ಪಾಳ್ಯ ವಾರ್ಡ್ನಲ್ಲಿ ಆಹಾರ ಸಾಮಗ್ರಿಯ ಕಿಟ್ ನೀಡುವುದಾಗಿ ಜನರಿಂದ ಕೆಲವರು ₹ 200 ಪಡೆದು ಟೋಕನ್ ನೀಡಿದ್ದಾರೆ. ಅವರು ನೀಡಿರುವ ಕಿಟ್ಗಳಲ್ಲಿ ಕಾರ್ಮಿಕ ಇಲಾಖೆಯ ಮುದ್ರೆ ಇದೆ. ಸರ್ಕಾರದ ಕಿಟ್ ಯಾರದ್ದೋ ಕೈ ಸೇರಿದ್ದು ಹೇಗೆ’ ಎಂದು ವಾಜಿದ್ ಪ್ರಶ್ನಿಸಿದರು.</p>.<p>‘ಈ ಆಹಾರದ ಕಿಟ್ಗಳ ವಿತರಣೆಯನ್ನು ತಡೆದಿರುವ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ: </strong>ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತ ಸರ್ಫರಾಜ್ ಖಾನ್, ‘ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮುಕ್ತಾಯವಾಗಿ ಅನೇಕ ದಿನಗಳೇ ಕಳೆದಿವೆ. ಈ ವಾರ್ಡ್ನಲ್ಲಿ ಈ ಕಿಟ್ಗಳು ಹೇಗೆ ತಲುಪಿದವೋ ತಿಳಿಯದು. ನಾವು ಕಿಟ್ ವಿತರಿಸುವಾಗ ಪ್ರತಿಯೊಬ್ಬ ಕಾರ್ಮಿಕರ ಆಧಾರ್ ನಂಬರ್ ಪಡೆದು ದೃಢೀಕರಿಸಿಕೊಂಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತ್ರ ಕಿಟ್ ವಿತರಿಸಲಾಗಿದೆ. ಕಿಟ್ ವಿತರಣೆ ಹೊಣೆಯನ್ನು ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>