ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತ ಸರ್ಫರಾಜ್ ಖಾನ್, ‘ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮುಕ್ತಾಯವಾಗಿ ಅನೇಕ ದಿನಗಳೇ ಕಳೆದಿವೆ. ಈ ವಾರ್ಡ್ನಲ್ಲಿ ಈ ಕಿಟ್ಗಳು ಹೇಗೆ ತಲುಪಿದವೋ ತಿಳಿಯದು. ನಾವು ಕಿಟ್ ವಿತರಿಸುವಾಗ ಪ್ರತಿಯೊಬ್ಬ ಕಾರ್ಮಿಕರ ಆಧಾರ್ ನಂಬರ್ ಪಡೆದು ದೃಢೀಕರಿಸಿಕೊಂಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತ್ರ ಕಿಟ್ ವಿತರಿಸಲಾಗಿದೆ. ಕಿಟ್ ವಿತರಣೆ ಹೊಣೆಯನ್ನು ಅನ್ಯ ವ್ಯಕ್ತಿಗಳಿಗೆ ವಹಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.