ಸುದ್ದಿಗಾರರ ಜತೆ ಬುಧವಾರ ಮತನಾಡಿದ ಅವರು, ‘ಮಣ್ಣಿನ ಮಕ್ಕಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಮೊಯಿಲಿ ಹೇಳಿದ್ದಾರೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಸರಸ್ವತಿ ಪುತ್ರ ಅವರು. ಕುವೆಂಪು ಅವರಿಗಿಂತಲೂ ದೊಡ್ಡ ಮಹಾಕವಿ. ಅವರು ಈ ರೀತಿ ಸುಳ್ಳು ಹೇಳಬಾರದಿತ್ತು. ನಮ್ಮಿಂದ ಏನು ಅನ್ಯಾಯವಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು’ ಎಂದರು.