ಚೆನ್ನೈ ಪ್ರಯಾಣಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕುಮಾರಸ್ವಾಮಿ, ‘ಹುಟ್ಟಿನಿಂದಲೇ ನನ್ನ ಹೃದಯದ ಕವಾಟ ಒಂದರಲ್ಲಿ ಸಮಸ್ಯೆ ಇದೆ. ಹಿಂದೆ ಎರಡು ಬಾರಿ ಪ್ರಾಣಿಜನ್ಯ ಪದಾರ್ಥಗಳಿಂದ ತಯಾರಿಸಿದ ‘ಟಿಶ್ಯೂ ಸ್ಟೆಂಟ್’ ಅಳವಡಿಸಲಾಗಿತ್ತು. ಈಗ ಲೋಹದ ಸ್ಟೆಂಟ್ ಅಳವಡಿಸುವ ಶಸ್ತ್ರಚಿಕಿತ್ಸೆಗಾಗಿ ಹೋಗುತ್ತಿದ್ದೇನೆ’ ಎಂದರು.