‘ಕ್ಷೌರಿಕ ವೃತ್ತಿಯಲ್ಲೇ ಅನೇಕ ಪಂಗಡಗಳಿವೆ. ಹಡಪದ ಸಮಾಜವನ್ನು ಸ್ಥಳೀಯ ಮಟ್ಟದಲ್ಲಿ ಬೇರೆ ಬೇರೆ ಹೆಸರಿನಿಂದ ಗುರುತಿಸಲಾಗುತ್ತಿದೆ. ಆದರೆ,ಸರ್ಕಾರ ಹಡಪ (ಕ್ಷೌರಿಕ) ಸಮುದಾಯವನ್ನು ಕಡೆಗಣಿಸಿದ್ದು, ಜನರು ಬಹಳ ಹಿಂದುಳಿದಿದ್ದಾರೆ. ಕೂಡಲೇ ಕ್ಷೌರಿಕ ಸಮಾಜವನ್ನು ಒಗ್ಗೂಡಿಸಿ ‘ಕ್ಷೌರಿಕ ನಿಗಮ’ ಸ್ಥಾಪಿಸಬೇಕು ಅಥವಾಹಡಪದ ಅಪ್ಪಣ್ಣ ಹೆಸರಿನಲ್ಲಿಯೇ ನಿಗಮ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.