<p>ಬೆಂಗಳೂರು: ದೇಶದ 29 ರಾಜ್ಯಗಳ ಸಂಸ್ಕೃತಿ-ಕಲೆಯನ್ನು ಬಿಂಬಿಸುವ ಕಲಾಕೃತಿಗಳು, ಕರ್ನಾಟಕದ ಕುಶಲ ಕರ್ಮಿಗಳ ಪ್ರತಿಭೆಗೆ ಕನ್ನಡಿ ಹಿಡಿಯುವ ಉತ್ಪನ್ನಗಳು, ಗ್ರಾಮೀಣ ಉದ್ಯೋಗ ಸೃಷ್ಟಿಯ ಸಾಕಾರ ರೂಪದಂತಿರುವ ಮಳಿಗೆಗಳು...</p>.<p>ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಪ್ರದರ್ಶನದಲ್ಲಿ ಕಂಡು ಬಂದ ನೋಟವಿದು.</p>.<p>ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು (ವಿಟಿಪಿಸಿ) ದಸ್ತಕರ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವು ಸೆ.1ರಿಂದ ಆರಂಭವಾಗಿದ್ದು, 7ರವರೆಗೆ ನಡೆಯಲಿದೆ.</p>.<p>ಒಂದೇ ಸೂರಿನಡಿ ದೇಶದ ಎಲ್ಲ ರಾಜ್ಯಗಳ ಕರಕುಶಲ ವಸ್ತುಗಳನ್ನು, ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಸಿಗುತ್ತಿದೆ. ಆಭರಣಗಳು, ಲೋಹದ ಕಲಾಕೃತಿಗಳು, ಚರ್ಮದ ಉತ್ಪನ್ನಗಳು,ವಿಭಿನ್ನ ಪೀಠೋಪಕರಣಗಳು ಸೇರಿದಂತೆ ಹಲವು ದೇಸಿ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.</p>.<p>ಭೌಗೋಳಿಕ ಸನ್ನದು (ಜಿಐ) ಮಾನ್ಯತೆ ಹೊಂದಿರುವ ರಾಜ್ಯದ ಉತ್ಪನ್ನಗಳ ಮಳಿಗೆಗಳೂ ಇಲ್ಲಿವೆ.ಸಂಡೂರಿನ ಬಂಜಾರ ಕಸೂತಿ ಕಲೆಯ ಉತ್ಪನ್ನಗಳು, ಬಿದರಿ ಕಲೆ, ಚನ್ನಪಟ್ಟಣದ ಬೊಂಬೆ ಮತ್ತು ಆಟಿಕೆ, ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳು ಹಾಗೂ ಇನ್ನಿತರ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.</p>.<p>ಹೊರರಾಜ್ಯದ ಕರಕುಶಲಕರ್ಮಿಗಳು ಬಾಡಿಗೆಗೆ ಮಳಿಗೆ ಪಡೆದಿದ್ದಾರೆ. ರಾಜ್ಯಸರ್ಕಾರವು ಕರ್ನಾಟಕದ ಕಲಾವಿದರು, ಕರಕುಶಲ ಕರ್ಮಿಗಳಿಗೆ ಉಚಿತವಾಗಿ ಮಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.</p>.<p>‘ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕಲೆ ಮತ್ತು ಸಂಸ್ಕೃತಿ ಹೊಂದಿರುತ್ತದೆ. ಅದಕ್ಕೆ ತಕ್ಕ ಕಲಾಕೃತಿಗಳು, ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗಿರುತ್ತದೆ. 29ಕ್ಕೂ ಹೆಚ್ಚು ರಾಜ್ಯಗಳ ಇಂತಹ ಕಲಾಕೃತಿಗಳು ಒಂದೇ ಕಡೆ ಸಿಗುತ್ತಿರುವುದು ಖುಷಿಯ ಸಂಗತಿ’ ಎಂದು ಗ್ರಾಹಕಿ ಗೌರಿ ಹೇಳಿದರು.</p>.<p>‘ಬೇರೆ ರಾಜ್ಯದ ಮಳಿಗೆಯವರು ವಾರಕ್ಕೆ ₹25 ಸಾವಿರದಿಂದ ₹40 ಸಾವಿರದವರೆಗೆ ಬಾಡಿಗೆ ನೀಡಬೇಕು. ರಾಜ್ಯಸರ್ಕಾರವು ನಮಗೆ ಉಚಿತವಾಗಿ ಮಳಿಗೆ ನೀಡಿದೆ. ಕೋವಿಡ್ ಬಿಕ್ಕಟ್ಟಿನಿಂದ ಎರಡು ವರ್ಷಗಳಲ್ಲಿ ಯಾವುದೇ ಮೇಳ ನಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ವಸ್ತುಪ್ರದರ್ಶನ ಹಮ್ಮಿಕೊಂಡಿರುವುದು ಅನುಕೂಲವಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಮೈಸೂರಿನ ಕರಕುಶಲಕರ್ಮಿ ಕೆ. ರಾಘವೇಂದ್ರ ಹೇಳಿದರು.</p>.<p>ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಮೇಳ ತೆರೆದಿರುತ್ತದೆ. ₹50 ಪ್ರವೇಶ ಶುಲ್ಕವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ದೇಶದ 29 ರಾಜ್ಯಗಳ ಸಂಸ್ಕೃತಿ-ಕಲೆಯನ್ನು ಬಿಂಬಿಸುವ ಕಲಾಕೃತಿಗಳು, ಕರ್ನಾಟಕದ ಕುಶಲ ಕರ್ಮಿಗಳ ಪ್ರತಿಭೆಗೆ ಕನ್ನಡಿ ಹಿಡಿಯುವ ಉತ್ಪನ್ನಗಳು, ಗ್ರಾಮೀಣ ಉದ್ಯೋಗ ಸೃಷ್ಟಿಯ ಸಾಕಾರ ರೂಪದಂತಿರುವ ಮಳಿಗೆಗಳು...</p>.<p>ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಪ್ರದರ್ಶನದಲ್ಲಿ ಕಂಡು ಬಂದ ನೋಟವಿದು.</p>.<p>ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು (ವಿಟಿಪಿಸಿ) ದಸ್ತಕರ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವು ಸೆ.1ರಿಂದ ಆರಂಭವಾಗಿದ್ದು, 7ರವರೆಗೆ ನಡೆಯಲಿದೆ.</p>.<p>ಒಂದೇ ಸೂರಿನಡಿ ದೇಶದ ಎಲ್ಲ ರಾಜ್ಯಗಳ ಕರಕುಶಲ ವಸ್ತುಗಳನ್ನು, ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಸಿಗುತ್ತಿದೆ. ಆಭರಣಗಳು, ಲೋಹದ ಕಲಾಕೃತಿಗಳು, ಚರ್ಮದ ಉತ್ಪನ್ನಗಳು,ವಿಭಿನ್ನ ಪೀಠೋಪಕರಣಗಳು ಸೇರಿದಂತೆ ಹಲವು ದೇಸಿ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.</p>.<p>ಭೌಗೋಳಿಕ ಸನ್ನದು (ಜಿಐ) ಮಾನ್ಯತೆ ಹೊಂದಿರುವ ರಾಜ್ಯದ ಉತ್ಪನ್ನಗಳ ಮಳಿಗೆಗಳೂ ಇಲ್ಲಿವೆ.ಸಂಡೂರಿನ ಬಂಜಾರ ಕಸೂತಿ ಕಲೆಯ ಉತ್ಪನ್ನಗಳು, ಬಿದರಿ ಕಲೆ, ಚನ್ನಪಟ್ಟಣದ ಬೊಂಬೆ ಮತ್ತು ಆಟಿಕೆ, ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳು ಹಾಗೂ ಇನ್ನಿತರ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.</p>.<p>ಹೊರರಾಜ್ಯದ ಕರಕುಶಲಕರ್ಮಿಗಳು ಬಾಡಿಗೆಗೆ ಮಳಿಗೆ ಪಡೆದಿದ್ದಾರೆ. ರಾಜ್ಯಸರ್ಕಾರವು ಕರ್ನಾಟಕದ ಕಲಾವಿದರು, ಕರಕುಶಲ ಕರ್ಮಿಗಳಿಗೆ ಉಚಿತವಾಗಿ ಮಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.</p>.<p>‘ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕಲೆ ಮತ್ತು ಸಂಸ್ಕೃತಿ ಹೊಂದಿರುತ್ತದೆ. ಅದಕ್ಕೆ ತಕ್ಕ ಕಲಾಕೃತಿಗಳು, ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗಿರುತ್ತದೆ. 29ಕ್ಕೂ ಹೆಚ್ಚು ರಾಜ್ಯಗಳ ಇಂತಹ ಕಲಾಕೃತಿಗಳು ಒಂದೇ ಕಡೆ ಸಿಗುತ್ತಿರುವುದು ಖುಷಿಯ ಸಂಗತಿ’ ಎಂದು ಗ್ರಾಹಕಿ ಗೌರಿ ಹೇಳಿದರು.</p>.<p>‘ಬೇರೆ ರಾಜ್ಯದ ಮಳಿಗೆಯವರು ವಾರಕ್ಕೆ ₹25 ಸಾವಿರದಿಂದ ₹40 ಸಾವಿರದವರೆಗೆ ಬಾಡಿಗೆ ನೀಡಬೇಕು. ರಾಜ್ಯಸರ್ಕಾರವು ನಮಗೆ ಉಚಿತವಾಗಿ ಮಳಿಗೆ ನೀಡಿದೆ. ಕೋವಿಡ್ ಬಿಕ್ಕಟ್ಟಿನಿಂದ ಎರಡು ವರ್ಷಗಳಲ್ಲಿ ಯಾವುದೇ ಮೇಳ ನಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ವಸ್ತುಪ್ರದರ್ಶನ ಹಮ್ಮಿಕೊಂಡಿರುವುದು ಅನುಕೂಲವಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಮೈಸೂರಿನ ಕರಕುಶಲಕರ್ಮಿ ಕೆ. ರಾಘವೇಂದ್ರ ಹೇಳಿದರು.</p>.<p>ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಮೇಳ ತೆರೆದಿರುತ್ತದೆ. ₹50 ಪ್ರವೇಶ ಶುಲ್ಕವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>