‘ವಸ್ತ್ರ ವಿನ್ಯಾಸಕಾರರು, ಕುಶಲಕರ್ಮಿಗಳು, ಆರ್ಥಿಕ ತಜ್ಞರು ಆಂದೋಲನದ ಭಾಗವಾಗಿದ್ದಾರೆ. ಅವರು ಕೂಡ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನತೆಯೇ ರಾಜ್ಯದಾದ್ಯಂತ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಿದ್ದಾರೆ. 'ಗ್ರಾಹಕನಾಗಿ ಒಳಗೆ ಬಾ, ಗ್ರಾಮೋದ್ಯೋಗ ಕಾರ್ಯಕರ್ತನಾಗಿ ಹೊರಬಾ' ಘೋಷವಾಕ್ಯದ ಮೂಲಕ ಗ್ರಾಹಕರನ್ನು ಖಾದಿಯತ್ತ ಆಕರ್ಷಿಸಲಿದ್ದೇವೆ.ಕೋವಿಡ್ನಿಂದ ಗ್ರಾಮೋದ್ಯೋಗಗಳು ಅವನತಿಯ ಅಂಚು ತಲುಪಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ’ ಎಂದರು.