ಗಿರಿಗೌಡದೊಡ್ಡಿ, ಸುಂಕದಕಟ್ಟೆ, ಮುಕೂಡ್ಲು, ಸೋಮನಹಳ್ಳಿ, ರಾಯರದೊಡ್ಡಿ, ರಾವುಗೋಡ್ಲು, ಕುಂಚಿಗೆರೆಪಾಳ್ಯ, ವಾಸುದೇವಪುರ, ಗುಟ್ಟೆಪಾಳ್ಯ, ನೆಟ್ಟಿಗೆರೆ, ಗುಳಕಮಳೆ, ವಡ್ಡರಪಾಳ್ಯ, ನಲ್ಲಕ್ಕನದೊಡ್ಡಿ, ಕಗ್ಗಲೀಪುರ, ಸೋಮಹಳ್ಳಿ, ನೆಲಗುಳಿ, ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಒತ್ತಡ ಹಾಕುತ್ತಿದೆ. ತಾತಂದಿರ ಕಾಲದಿಂದಲೂ ಪಹಣಿ ಖಾತೆ ಇದ್ದರೂ ಅರಣ್ಯ ಭೂಮಿ ಎಂದು ನೋಟಿಸ್ ನೀಡುತ್ತಿದೆ. ಬೇರೆ ಕಡೆಗೆ ನಾವು ಹೋಗಲೇಬೇಕಿದ್ದರೆ ಒಳ್ಳೆಯ ಪ್ರದೇಶದಲ್ಲಿ ಜಮೀನು ನೀಡಿ ಎಂದು ಆಗ್ರಹಿಸಿದರು.