ಚರ್ಚ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ‘1884ರಲ್ಲಿ ಮೈಸೂರು ಮಹಾರಾಜರು ಚರ್ಚ್ಗೆ ಭೂಮಿ ನೀಡಿದ್ದಾರೆ. ನಂತರ ಬಿಷಪ್ ಅವರು ಆಸ್ತಿಯ ಮಾಲೀಕತ್ವದ ಹಕ್ಕು ಚಲಾಯಿಸುತ್ತಿದ್ದಾರೆ. ಈ ಹಿಂದೆ ಜಲಮಂಡಳಿಗೂ ಸ್ವಲ್ಪ ಜಮೀನು ಹಸ್ತಾಂತರಿಸಲಾಗಿದ್ದು, ಆಗ ರಕ್ಷಣಾ ಇಲಾಖೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ’ ಎಂದರು.