<p><strong>ಬೆಂಗಳೂರು</strong>: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇರಳದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿಮಾಡಿರುವ ಮೆರವಣಿಗೆಯ ವಿಡಿಯೊವನ್ನುಶನಿವಾರ ಇಲ್ಲಿ ತೋರಿಸುವ ಮೂಲಕ ಪಾಠ ಮಾಡಿದ ಪ್ರಸಂಗ ನಡೆಯಿತು.</p>.<p>ಪಕ್ಷದ ಕಚೇರಿಯಲ್ಲಿಮಹಿಳಾ ಕಾರ್ಯಕರ್ತರಿಗೆ ಸಭೆ ಏರ್ಪಡಿಸಲಾಗಿತ್ತು. ‘ಕೇರಳದ ಕ್ಯಾಲಿಕಟ್ನಲ್ಲಿನಮ್ಮ ಪಕ್ಷದವರು ಹೇಗೆ ಶಿಸ್ತಿನಿಂದ ಪ್ರತಿಭಟನೆ ಮಾಡುತ್ತಾರೆ ನೋಡಿ, ಅದನ್ನು ತೋರಿಸುವುದಕ್ಕೆ ನಿಮಗೆ ಈ ವಿಡಿಯೊ ತೋರಿಸುತ್ತಿದ್ದೇನೆ.ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಇದೆ, ಅವರು ಈಗಿನಿಂದಲೇ ಹೇಗೆ ಕೆಲಸ ಮಾಡುತ್ತಿದ್ದಾರೆ ನೋಡಿ’ ಎಂದರು.</p>.<p>‘ಎರಡು ಗ್ರಹಣ ಕಳೆದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬರುತ್ತಿದ್ದೇನೆ.ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗಿದ್ದೆ, ವಿಶ್ರಾಂತಿ ಪಡೆಯಲು ಹೇಳಿದ್ದರು‘ ಎಂದರು.</p>.<p>‘ನಮಗೆಲ್ಲಾ ಹೆಚ್ಚಿನ ಶಕ್ತಿ ಸಿಗಬೇಕಾದರೆ ದೇವೇಗೌಡರು ರಾಜ್ಯಸಭೆಗೆ ಹೋಗಬೇಕು’ ಎಂದು ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೇರಳದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿಮಾಡಿರುವ ಮೆರವಣಿಗೆಯ ವಿಡಿಯೊವನ್ನುಶನಿವಾರ ಇಲ್ಲಿ ತೋರಿಸುವ ಮೂಲಕ ಪಾಠ ಮಾಡಿದ ಪ್ರಸಂಗ ನಡೆಯಿತು.</p>.<p>ಪಕ್ಷದ ಕಚೇರಿಯಲ್ಲಿಮಹಿಳಾ ಕಾರ್ಯಕರ್ತರಿಗೆ ಸಭೆ ಏರ್ಪಡಿಸಲಾಗಿತ್ತು. ‘ಕೇರಳದ ಕ್ಯಾಲಿಕಟ್ನಲ್ಲಿನಮ್ಮ ಪಕ್ಷದವರು ಹೇಗೆ ಶಿಸ್ತಿನಿಂದ ಪ್ರತಿಭಟನೆ ಮಾಡುತ್ತಾರೆ ನೋಡಿ, ಅದನ್ನು ತೋರಿಸುವುದಕ್ಕೆ ನಿಮಗೆ ಈ ವಿಡಿಯೊ ತೋರಿಸುತ್ತಿದ್ದೇನೆ.ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಇದೆ, ಅವರು ಈಗಿನಿಂದಲೇ ಹೇಗೆ ಕೆಲಸ ಮಾಡುತ್ತಿದ್ದಾರೆ ನೋಡಿ’ ಎಂದರು.</p>.<p>‘ಎರಡು ಗ್ರಹಣ ಕಳೆದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬರುತ್ತಿದ್ದೇನೆ.ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗಿದ್ದೆ, ವಿಶ್ರಾಂತಿ ಪಡೆಯಲು ಹೇಳಿದ್ದರು‘ ಎಂದರು.</p>.<p>‘ನಮಗೆಲ್ಲಾ ಹೆಚ್ಚಿನ ಶಕ್ತಿ ಸಿಗಬೇಕಾದರೆ ದೇವೇಗೌಡರು ರಾಜ್ಯಸಭೆಗೆ ಹೋಗಬೇಕು’ ಎಂದು ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>