<p><strong>ಬೆಂಗಳೂರು:</strong> ನಗರದ ಹಲವೆಡೆ ಭಾನುವಾರ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ನಗರದ ವಾತಾವರಣ ಇನ್ನಷ್ಟು ತಂಪಾಯಿತು.</p>.<p>ಬಿಳೇಕಹಳ್ಳಿ, ಸಾರಕ್ಕಿ ಭಾಗದಲ್ಲಿ ಜೋರು ಮಳೆಯಾಗಿದೆ. ಮಳೆಯಿಂದ ಅಂಡರ್ ಪಾಸ್ ಹಾಗೂ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಬಿರುಗಾಳಿಯಿಂದ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಗರದ ಉತ್ತರ ಭಾಗದ ಪ್ರದೇಶಗಳಲ್ಲಿಯೂ ಜೋರು ಮಳೆಯಾಗಿದೆ.</p>.<p><strong>ಮಳೆ ಪ್ರಮಾಣ:</strong> ಬಿಳೇಕಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 5.25 ಸೆಂ.ಮೀ. ಮಳೆಯಾಗಿದೆ. ಸಾರಕ್ಕಿ, ದೊರೆಸಾನಿಪಾಳ್ಯ, ಕೋಣನಕುಂಟೆಗಳಲ್ಲಿ ತಲಾ 4.65 ಸೆಂ.ಮೀ. ಮಳೆ ದಾಖಲಾಗಿದೆ. ಬಿಟಿಎಂ ಲೇಔಟ್ (3.7 ಸೆಂ.ಮೀ.), ಬೊಮ್ಮನಹಳ್ಳಿ (3.4 ಸೆಂ.ಮೀ.), ಅರಕೆರೆ (3 ಸೆಂ.ಮೀ.), ಬೇಗೂರು (3 ಸೆಂ.ಮೀ.), ಕೂಡಿಗೆಹಳ್ಳಿ (2.6 ಸೆಂ.ಮೀ.), ರಾಧಾಕೃಷ್ಣನಗರಗಳಲ್ಲಿ (2.6 ಸೆಂ.ಮೀ.) ಉತ್ತಮ ಮಳೆಯಾಗಿದೆ. ಕುಮಾರಸ್ವಾಮಿ ಬಡಾವಣೆ, ಬಸವನಗುಡಿ, ಸಿಂಗಸಂದ್ರ, ವಿಶ್ವನಾಥ ನಾಗೇನಹಳ್ಳಿ, ಕೋರಮಂಗಲ, ವನ್ನಾರ್ಪೇಟೆಗಳಲ್ಲಿ 2 ಸೆಂ.ಮೀ.ನಷ್ಟು ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಹಲವೆಡೆ ಭಾನುವಾರ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ನಗರದ ವಾತಾವರಣ ಇನ್ನಷ್ಟು ತಂಪಾಯಿತು.</p>.<p>ಬಿಳೇಕಹಳ್ಳಿ, ಸಾರಕ್ಕಿ ಭಾಗದಲ್ಲಿ ಜೋರು ಮಳೆಯಾಗಿದೆ. ಮಳೆಯಿಂದ ಅಂಡರ್ ಪಾಸ್ ಹಾಗೂ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಬಿರುಗಾಳಿಯಿಂದ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಗರದ ಉತ್ತರ ಭಾಗದ ಪ್ರದೇಶಗಳಲ್ಲಿಯೂ ಜೋರು ಮಳೆಯಾಗಿದೆ.</p>.<p><strong>ಮಳೆ ಪ್ರಮಾಣ:</strong> ಬಿಳೇಕಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 5.25 ಸೆಂ.ಮೀ. ಮಳೆಯಾಗಿದೆ. ಸಾರಕ್ಕಿ, ದೊರೆಸಾನಿಪಾಳ್ಯ, ಕೋಣನಕುಂಟೆಗಳಲ್ಲಿ ತಲಾ 4.65 ಸೆಂ.ಮೀ. ಮಳೆ ದಾಖಲಾಗಿದೆ. ಬಿಟಿಎಂ ಲೇಔಟ್ (3.7 ಸೆಂ.ಮೀ.), ಬೊಮ್ಮನಹಳ್ಳಿ (3.4 ಸೆಂ.ಮೀ.), ಅರಕೆರೆ (3 ಸೆಂ.ಮೀ.), ಬೇಗೂರು (3 ಸೆಂ.ಮೀ.), ಕೂಡಿಗೆಹಳ್ಳಿ (2.6 ಸೆಂ.ಮೀ.), ರಾಧಾಕೃಷ್ಣನಗರಗಳಲ್ಲಿ (2.6 ಸೆಂ.ಮೀ.) ಉತ್ತಮ ಮಳೆಯಾಗಿದೆ. ಕುಮಾರಸ್ವಾಮಿ ಬಡಾವಣೆ, ಬಸವನಗುಡಿ, ಸಿಂಗಸಂದ್ರ, ವಿಶ್ವನಾಥ ನಾಗೇನಹಳ್ಳಿ, ಕೋರಮಂಗಲ, ವನ್ನಾರ್ಪೇಟೆಗಳಲ್ಲಿ 2 ಸೆಂ.ಮೀ.ನಷ್ಟು ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>