<p><strong>ಬೆಂಗಳೂರು: </strong>ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್ನಲ್ಲಿ ಹೊಸದಾಗಿ ಎರೆಹುಳ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿಬಿಬಿಎಂಪಿ ಎರೆಹುಳವನ್ನು ಪ್ರತಿ ಕೆ.ಜಿ.ಗೆ ₹ 40ರಂತೆ ಮಾರಾಟ ಮಾಡಲಿದೆ.</p>.<p>ಜಯನಗರ 6ನೇ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮಣ್ ರಾವ್ ಬುಲೇವಾರ್ಡ್ ‘ಡಿ’ ಉದ್ಯಾನದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವನ್ನು ಕಂದಾಯ ಸಚಿವ ಆರ್.ಅಶೋಕ ಬುಧವಾರ ಉದ್ಘಾಟಿಸಿದರು.</p>.<p>ಯಡಿಯೂರು ವಾರ್ಡ್ನಲ್ಲಿರಸ್ತೆಯ ಇಕ್ಕೆಲಗಳಲ್ಲಿ ಮತ್ತು 17 ಉದ್ಯಾನಗಳಲ್ಲಿ ಇರುವ ಸಾವಿರಾರು ಮರಗಳಿಂದ ಉದುರುವ ಒಣ ಎಲೆಗಳನ್ನು ಶೇಖರಿಸಿ, ಈ ‘ಎರೆಹುಳು ಘಟಕ’ದಲ್ಲಿ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಈ ಸಲುವಾಗಿ ತಲಾ 17 ಸಾವಿರ ಲೀಟರ್ ಸಾಮರ್ಥ್ಯದ ಎರಡು ತೊಟ್ಟಿಗಳನ್ನು ನಿರ್ಮಿಸಲಾಗಿದೆ.</p>.<p>‘ತಲಾ 10 ಕೆ.ಜಿ. ತೂಕದಷ್ಟು ಎರೆಹುಳುಗಳನ್ನು ಅವುಗಳಲ್ಲಿ ಬಿಡಲಾಗುವುದು. ಇದರೊಂದಿಗೆ ಅಗತ್ಯ ಪ್ರಮಾಣದ ನೀರು ಮತ್ತು ಸಗಣಿಯನ್ನು ಬೆರೆಸಲಾಗುವುದು. 20 ರಿಂದ 25 ದಿನಗಳೊಳಗಾಗಿ ಎರೆಹುಳುಗಳು ಒಣ ಎಲೆಗಳನ್ನು ತಿಂದು ಸಾವಯವ ಗೊಬ್ಬರ ಉತ್ಪಾದಿಸುತ್ತವೆ. ಈ ಘಟಕದಲ್ಲಿ ಉತ್ಪತ್ತಿಯಾಗುವ ಗೊಬ್ಬರ ಹಾಗೂ ಎರೆಹುಳಗಳನ್ನು ಮಾರಾಟ ಮಾಡಲಾಗುತ್ತದೆ. ನಗರದ ಸುತ್ತಮುತ್ತಲಿನ ರೈತರಿಗೂ ಈ ಘಟಕ ಪ್ರಯೋಜನಕಾರಿಯಾಗಲಿದೆ’ ಎಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್ ತಿಳಿಸಿದರು.</p>.<p>‘ಪಾಲಿಕೆಯ 774 ಉದ್ಯಾನವನಗಳು ಹಾಗೂ ಲಾಲ್ಬಾಗ್ ಸಸ್ಯ ತೋಟ, ಕಬ್ಬನ್ ಉದ್ಯಾನ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಬಹಳಷ್ಟು ಉದ್ಯಾನಗಳಿಗೂ ಈ ಘಟಕದಿಂದ ಎರೆಹುಳು ಪೂರೈಕೆ ಮಾಡುವ ಉದ್ದೇಶವಿದೆ’ ಎಂದು ಬಿಬಿಎಂಪಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್ನಲ್ಲಿ ಹೊಸದಾಗಿ ಎರೆಹುಳ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿಬಿಬಿಎಂಪಿ ಎರೆಹುಳವನ್ನು ಪ್ರತಿ ಕೆ.ಜಿ.ಗೆ ₹ 40ರಂತೆ ಮಾರಾಟ ಮಾಡಲಿದೆ.</p>.<p>ಜಯನಗರ 6ನೇ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮಣ್ ರಾವ್ ಬುಲೇವಾರ್ಡ್ ‘ಡಿ’ ಉದ್ಯಾನದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವನ್ನು ಕಂದಾಯ ಸಚಿವ ಆರ್.ಅಶೋಕ ಬುಧವಾರ ಉದ್ಘಾಟಿಸಿದರು.</p>.<p>ಯಡಿಯೂರು ವಾರ್ಡ್ನಲ್ಲಿರಸ್ತೆಯ ಇಕ್ಕೆಲಗಳಲ್ಲಿ ಮತ್ತು 17 ಉದ್ಯಾನಗಳಲ್ಲಿ ಇರುವ ಸಾವಿರಾರು ಮರಗಳಿಂದ ಉದುರುವ ಒಣ ಎಲೆಗಳನ್ನು ಶೇಖರಿಸಿ, ಈ ‘ಎರೆಹುಳು ಘಟಕ’ದಲ್ಲಿ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಈ ಸಲುವಾಗಿ ತಲಾ 17 ಸಾವಿರ ಲೀಟರ್ ಸಾಮರ್ಥ್ಯದ ಎರಡು ತೊಟ್ಟಿಗಳನ್ನು ನಿರ್ಮಿಸಲಾಗಿದೆ.</p>.<p>‘ತಲಾ 10 ಕೆ.ಜಿ. ತೂಕದಷ್ಟು ಎರೆಹುಳುಗಳನ್ನು ಅವುಗಳಲ್ಲಿ ಬಿಡಲಾಗುವುದು. ಇದರೊಂದಿಗೆ ಅಗತ್ಯ ಪ್ರಮಾಣದ ನೀರು ಮತ್ತು ಸಗಣಿಯನ್ನು ಬೆರೆಸಲಾಗುವುದು. 20 ರಿಂದ 25 ದಿನಗಳೊಳಗಾಗಿ ಎರೆಹುಳುಗಳು ಒಣ ಎಲೆಗಳನ್ನು ತಿಂದು ಸಾವಯವ ಗೊಬ್ಬರ ಉತ್ಪಾದಿಸುತ್ತವೆ. ಈ ಘಟಕದಲ್ಲಿ ಉತ್ಪತ್ತಿಯಾಗುವ ಗೊಬ್ಬರ ಹಾಗೂ ಎರೆಹುಳಗಳನ್ನು ಮಾರಾಟ ಮಾಡಲಾಗುತ್ತದೆ. ನಗರದ ಸುತ್ತಮುತ್ತಲಿನ ರೈತರಿಗೂ ಈ ಘಟಕ ಪ್ರಯೋಜನಕಾರಿಯಾಗಲಿದೆ’ ಎಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್ ತಿಳಿಸಿದರು.</p>.<p>‘ಪಾಲಿಕೆಯ 774 ಉದ್ಯಾನವನಗಳು ಹಾಗೂ ಲಾಲ್ಬಾಗ್ ಸಸ್ಯ ತೋಟ, ಕಬ್ಬನ್ ಉದ್ಯಾನ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಬಹಳಷ್ಟು ಉದ್ಯಾನಗಳಿಗೂ ಈ ಘಟಕದಿಂದ ಎರೆಹುಳು ಪೂರೈಕೆ ಮಾಡುವ ಉದ್ದೇಶವಿದೆ’ ಎಂದು ಬಿಬಿಎಂಪಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>