ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜ ಹಾರಿಸಿ ಬರ್ಬೇಕು, ಇಲ್ಲ ಮೈ ಮೇಲೆ ಹೊದ್ದು ಬರ್ಬೇಕು: ಮಹಾದೇವಿ

Last Updated 12 ಮಾರ್ಚ್ 2021, 21:50 IST
ಅಕ್ಷರ ಗಾತ್ರ

ಹೆಸರಘಟ್ಟ: ’ಯುದ್ದ ಭೂಮಿಯಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಬೇಕು. ಇಲ್ಲದಿದ್ದರೆ ಶತ್ರುಗಳ ಜೊತೆ ಹೋರಾಡಿ ವೀರ ಮರಣವನ್ನು ಹೊಂದಿ ಮೈಮೇಲೆ ರಾಷ್ಟ್ರ ಧ್ವಜವನ್ನು ಹೊದ್ದು ಬರಬೇಕು. ಆಗಲೇ ಬದುಕು ಸಾರ್ಥಕ ವಾಗುವುದು‘ ಎಂದು ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಹೇಳಿದರು.

ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಹಿತ ಚಿಂತನಾ ಟ್ರಸ್ಟ್ ತೋಟಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಸೂರ್ಯ ಲಕ್ಷ
ದೀಪೋತ್ಸವದಲ್ಲಿ ಅವರು ಮಾತನಾಡಿದರು.

’ಪತಿ ಹನುಮಂತಪ್ಪ ಕೊಪ್ಪದ ಅವರು 6 ದಿನಗಳ ಕಾಲ ಸಿಯಾಚಿನ್‍ನ ಹಿಮ ಕುಸಿತ ಪ್ರದೇಶದಲ್ಲಿ ಜೀವನ್ಮರಣದ ಹೋರಾಟ ಮಾಡಿ ವೀರ ಮರಣ ಹೊಂದಿದರು. ಅವರು ತಮ್ಮ ಮೈ ಮೇಲೆ ರಾಷ್ಟ್ರಧ್ವಜ ಹೊದ್ದು ಬಂದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ‘ ಎಂದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT