ಅದರಿಂದ ತೀವ್ರ ಅಸಮಾಧಾನಗೊಂಡ ಪೀಠ, ‘ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಶಾಸನಬದ್ಧವಾದ ಕೆಲಸ ಮಾಡದೆ ನ್ಯಾಯಾಲಯಕ್ಕೆ ಆಯೋಗ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಿಸಿದೆ. ಅದಕ್ಕಾಗಿ ಸರ್ಕಾರಕ್ಕೆ ವಿಧಿಸುವ ದಂಡದ ಮೊತ್ತ ₹10 ಲಕ್ಷಕ್ಕಿಂತ ಕಡಿಮೆ ಇರುವುದಿಲ್ಲ’ ಎಂದು ಹೇಳಿತು. ವಾರ್ಡ್ ಮರು ವಿಂಗಡಣೆ ಆರಂಭಿಸಿದ್ದು ಯಾವಾಗ? ಕಳೆದ ಚುನಾವಣೆ ವೇಳೆ 2011ರ ಜನಗಣತಿ ಆಧರಿಸಿ ವಾರ್ಡ್ ಮರು ವಿಂಗಡಣೆ ಮಾಡಲಾಗಿದೆಯೇ? ಎಂದು ಮಾಹಿತಿ ನೀಡಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ಪೀಠ, ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು.