<p><strong>ಬೆಂಗಳೂರು:</strong> ವಿಚ್ಛೇದನ ಹೊಂದಿ ನಿವೃತ್ತಿಯ ಅಂಚಿನಲ್ಲಿರುವ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.</p><p>ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ 59 ವರ್ಷದ ಅಧಿಕಾರಿಯಾಗಿರುವ ಅರ್ಜಿದಾರರ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.</p><p>"ನಿವೃತ್ತಿಗೆ ಇನ್ನೊಂದು ವರ್ಷ ಇರುವಾಗ ಇದೆಲ್ಲಾ ಬೇಕಿತ್ತಾ? ಈಗ ನೋಡಿ ನಿವೃತ್ತಿಯ ಲಾಭಕ್ಕೆ ಸಂಕಟ ಎದುರಾಗಿದೆ" ಎಂದು ಅರ್ಜಿದಾರರ ನಡೆಗೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, "ಇಬ್ಬರ ನಡುವಿನ ಲೈಂಗಿಕ ಸಂಬಂಧ ಒಪ್ಪಿತವಾಗಿರುವ ಕಾರಣ ಅರ್ಜಿದಾರರ ವಿರುದ್ಧ, ಭಾರತೀಯ ದಂಡ ಸಂಹಿತೆ-1860ರ ಕಲಂ 376 ಮತ್ತು 506ರ ಅಡಿಯಲ್ಲಿನ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದೆ.</p><p>ಅರ್ಜಿದಾರರು ಮತ್ತು ದೂರುದಾರ ಮಹಿಳೆ ಶಾದಿ ಡಾಟ್ ಕಾಮ್ ನಲ್ಲಿ ಪರಿಚಿತರಾಗಿದ್ದರು. ಈ ಸ್ನೇಹ ಗಾಢವಾಗಿ ಲೈಂಗಿಕ ಸಂಬಂಧಕ್ಕೂ ವಿಸ್ತರಿಸಿತ್ತು. "ನಾನು ಗರ್ಭ ಧರಿಸಿದ ಬಳಿಕ ಅರ್ಜಿದಾರ ಮುಂಬೈಗೆ ಪರಾರಿಯಾಗಿದ್ದಾರೆ" ಎಂದು ಮಹಿಳೆ ದೂರು ನೀಡಿದ್ದಾರೆ. ಅರ್ಜಿದಾರರು ಮತ್ತು ದೂರುದಾರ ಮಹಿಳೆ ಇಬ್ಬರೂ ವಿಚ್ಛೇದಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಚ್ಛೇದನ ಹೊಂದಿ ನಿವೃತ್ತಿಯ ಅಂಚಿನಲ್ಲಿರುವ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.</p><p>ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ 59 ವರ್ಷದ ಅಧಿಕಾರಿಯಾಗಿರುವ ಅರ್ಜಿದಾರರ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.</p><p>"ನಿವೃತ್ತಿಗೆ ಇನ್ನೊಂದು ವರ್ಷ ಇರುವಾಗ ಇದೆಲ್ಲಾ ಬೇಕಿತ್ತಾ? ಈಗ ನೋಡಿ ನಿವೃತ್ತಿಯ ಲಾಭಕ್ಕೆ ಸಂಕಟ ಎದುರಾಗಿದೆ" ಎಂದು ಅರ್ಜಿದಾರರ ನಡೆಗೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, "ಇಬ್ಬರ ನಡುವಿನ ಲೈಂಗಿಕ ಸಂಬಂಧ ಒಪ್ಪಿತವಾಗಿರುವ ಕಾರಣ ಅರ್ಜಿದಾರರ ವಿರುದ್ಧ, ಭಾರತೀಯ ದಂಡ ಸಂಹಿತೆ-1860ರ ಕಲಂ 376 ಮತ್ತು 506ರ ಅಡಿಯಲ್ಲಿನ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದೆ.</p><p>ಅರ್ಜಿದಾರರು ಮತ್ತು ದೂರುದಾರ ಮಹಿಳೆ ಶಾದಿ ಡಾಟ್ ಕಾಮ್ ನಲ್ಲಿ ಪರಿಚಿತರಾಗಿದ್ದರು. ಈ ಸ್ನೇಹ ಗಾಢವಾಗಿ ಲೈಂಗಿಕ ಸಂಬಂಧಕ್ಕೂ ವಿಸ್ತರಿಸಿತ್ತು. "ನಾನು ಗರ್ಭ ಧರಿಸಿದ ಬಳಿಕ ಅರ್ಜಿದಾರ ಮುಂಬೈಗೆ ಪರಾರಿಯಾಗಿದ್ದಾರೆ" ಎಂದು ಮಹಿಳೆ ದೂರು ನೀಡಿದ್ದಾರೆ. ಅರ್ಜಿದಾರರು ಮತ್ತು ದೂರುದಾರ ಮಹಿಳೆ ಇಬ್ಬರೂ ವಿಚ್ಛೇದಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>