<p><strong>ಬೆಂಗಳೂರು:</strong> ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಟೊ ರಿಕ್ಷಾ ಚಾಲಕನ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್, ಈಗಾಗಲೇ ಏಳು ವರ್ಷ ಆರು ತಿಂಗಳು ಹದಿನಾರು ದಿನಗಳ ಜೈಲು ಶಿಕ್ಷೆ ಅನುಭವಿಸಿರುವ ಆತನ ಬಿಡುಗಡೆಗೆ ಆದೇಶಿಸಿದೆ.</p>.<p>'ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು' ಎಂದು ಕೋರಿ ಬಿಲವಾರದಹಳ್ಳಿ ನಿವಾಸಿ ವಾಸಿಮ್ (30) ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.</p>.<p>ಈ ಕುರಿತಂತೆ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದೆ.</p>.<p>'ಆರೋಪಿಗೆ ಮಹಿಳೆಯನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆಕೆಯ ಮಾತುಗಳಿಂದ ದಿಢೀರ್ ಪ್ರಚೋದನೆಗೆ ಒಳಗಾಗಿ ಕೆನ್ನೆಗೆ ಹೊಡೆದು ಕತ್ತು ಹಿಸುಕಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಹಾಗಾಗಿ, ಇದು ಪೂರ್ವನಿಯೋಜಿತ ಕೊಲೆ ಎಂದು ಹೇಳಲಾಗುವುದಿಲ್ಲ' ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.</p>.<p>ಪ್ರಕರಣವೇನು?: ಫರೀದಾ ಬೀಬಿ ಎಂಬುವರಿಂದ ವಾಸಿಮ್ ₹ 20 ಸಾವಿರ ಸಾಲ ಪಡೆದಿದ್ದರು. ಸಾಲ ಪಡೆಯವಾಗ ಖಾಲಿ ಪತ್ರಕ್ಕೆ ಸಹಿ ಹಾಕಿದ್ದರು. ನಂತರ ಆ ಪತ್ರವು ನಿಖಾನಾಮಾ (ಮದುವೆ ಒಪ್ಪಂದದ ಪತ್ರ) ಎಂದು<br />ಪ್ರತಿಪಾದಿಸಿದ್ದ ಫರೀದಾ ತನ್ನನ್ನು ಮದುವೆಯಾಗು ಎಂದು ವಾಸಿಮ್ಗೆ ಒತ್ತಾಯಿಸಿದ್ದರು.</p>.<p>ಅದಾಗಲೇ ಮದುವೆಯಾಗಿದ್ದ ವಾಸಿಮ್, ಫರೀದಾ ಅವರನ್ನು ವಿವಾಹವಾಗಲು ನಿರಾಕರಿಸಿದ್ದರು.</p>.<p>ಏತನ್ಮಧ್ಯೆ 2014ರ ಏಪ್ರಿಲ್ 17ರಂದು ರಾತ್ರಿ 11 ಗಂಟೆಯಲ್ಲಿ ಮನೆಯಲ್ಲಿ ವಾಸಿಮ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದ ಫರೀದಾ, ಮತ್ತೊಬ್ಬ ವ್ಯಕ್ತಿಗೆ ಪೋನ್ ಕರೆ ಮಾಡಿ ವಾಸಿಮ್ ಪತ್ನಿಯನ್ನು ಅತ್ಯಾಚಾರ ಮಾಡುವಂತೆ ಸೂಚಿಸಿದ್ದರು.<br />ಇದರಿಂದ ದಿಢೀರ್ ಪ್ರಚೋದನೆಗೆ ಒಳಗಾದ ವಾಸಿಮ್, ಫರೀದಾ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದರು. ಅದೇ ದಿನ (2018ರ ಏಪ್ರಿಲ್18) ಬೆಳಗಿನ ಜಾವ 3.45ಕ್ಕೆ ತಲಘಟ್ಟಪುರ ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿದ್ದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.</p>.<p>ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ವಾಸಿಮ್ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2016ರ ಮೇ 26ರಂದು ಆದೇಶಿಸಿತ್ತು. ಜೀವಾವಧಿ ಶಿಕ್ಷೆ<br />ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಾಸಿಮ್ ಪರ ವಕೀಲ ಎಂ.ಆರ್.ನಂಜುಂಡಗೌಡ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಟೊ ರಿಕ್ಷಾ ಚಾಲಕನ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್, ಈಗಾಗಲೇ ಏಳು ವರ್ಷ ಆರು ತಿಂಗಳು ಹದಿನಾರು ದಿನಗಳ ಜೈಲು ಶಿಕ್ಷೆ ಅನುಭವಿಸಿರುವ ಆತನ ಬಿಡುಗಡೆಗೆ ಆದೇಶಿಸಿದೆ.</p>.<p>'ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು' ಎಂದು ಕೋರಿ ಬಿಲವಾರದಹಳ್ಳಿ ನಿವಾಸಿ ವಾಸಿಮ್ (30) ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.</p>.<p>ಈ ಕುರಿತಂತೆ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದೆ.</p>.<p>'ಆರೋಪಿಗೆ ಮಹಿಳೆಯನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆಕೆಯ ಮಾತುಗಳಿಂದ ದಿಢೀರ್ ಪ್ರಚೋದನೆಗೆ ಒಳಗಾಗಿ ಕೆನ್ನೆಗೆ ಹೊಡೆದು ಕತ್ತು ಹಿಸುಕಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಹಾಗಾಗಿ, ಇದು ಪೂರ್ವನಿಯೋಜಿತ ಕೊಲೆ ಎಂದು ಹೇಳಲಾಗುವುದಿಲ್ಲ' ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.</p>.<p>ಪ್ರಕರಣವೇನು?: ಫರೀದಾ ಬೀಬಿ ಎಂಬುವರಿಂದ ವಾಸಿಮ್ ₹ 20 ಸಾವಿರ ಸಾಲ ಪಡೆದಿದ್ದರು. ಸಾಲ ಪಡೆಯವಾಗ ಖಾಲಿ ಪತ್ರಕ್ಕೆ ಸಹಿ ಹಾಕಿದ್ದರು. ನಂತರ ಆ ಪತ್ರವು ನಿಖಾನಾಮಾ (ಮದುವೆ ಒಪ್ಪಂದದ ಪತ್ರ) ಎಂದು<br />ಪ್ರತಿಪಾದಿಸಿದ್ದ ಫರೀದಾ ತನ್ನನ್ನು ಮದುವೆಯಾಗು ಎಂದು ವಾಸಿಮ್ಗೆ ಒತ್ತಾಯಿಸಿದ್ದರು.</p>.<p>ಅದಾಗಲೇ ಮದುವೆಯಾಗಿದ್ದ ವಾಸಿಮ್, ಫರೀದಾ ಅವರನ್ನು ವಿವಾಹವಾಗಲು ನಿರಾಕರಿಸಿದ್ದರು.</p>.<p>ಏತನ್ಮಧ್ಯೆ 2014ರ ಏಪ್ರಿಲ್ 17ರಂದು ರಾತ್ರಿ 11 ಗಂಟೆಯಲ್ಲಿ ಮನೆಯಲ್ಲಿ ವಾಸಿಮ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದ ಫರೀದಾ, ಮತ್ತೊಬ್ಬ ವ್ಯಕ್ತಿಗೆ ಪೋನ್ ಕರೆ ಮಾಡಿ ವಾಸಿಮ್ ಪತ್ನಿಯನ್ನು ಅತ್ಯಾಚಾರ ಮಾಡುವಂತೆ ಸೂಚಿಸಿದ್ದರು.<br />ಇದರಿಂದ ದಿಢೀರ್ ಪ್ರಚೋದನೆಗೆ ಒಳಗಾದ ವಾಸಿಮ್, ಫರೀದಾ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದರು. ಅದೇ ದಿನ (2018ರ ಏಪ್ರಿಲ್18) ಬೆಳಗಿನ ಜಾವ 3.45ಕ್ಕೆ ತಲಘಟ್ಟಪುರ ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿದ್ದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.</p>.<p>ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ವಾಸಿಮ್ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2016ರ ಮೇ 26ರಂದು ಆದೇಶಿಸಿತ್ತು. ಜೀವಾವಧಿ ಶಿಕ್ಷೆ<br />ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಾಸಿಮ್ ಪರ ವಕೀಲ ಎಂ.ಆರ್.ನಂಜುಂಡಗೌಡ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>