ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಪರಿಷತ್ಗೆ ಎಂಟು ತಜ್ಞರನ್ನು ನಾಮನಿರ್ದೇಶನ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಶ್ರಾಂತ ಕುಲಪತಿಗಳಾದ ರಾಜಾಸಾಬ್, ಹಿ.ಚಿ.ಬೋರಲಿಂಗಯ್ಯ, ರಾಮಚಂದ್ರಗೌಡ, ಎಂ.ಎಸ್.ಸುಭಾಷ್, ನಿವೃತ್ತ ಕುಲಸಚಿವೆ ಸುನಂದಮ್ಮ, ಶಿಕ್ಷಣ ತಜ್ಞರಾದ ಜಯರಾಂ ಮೇಲುಕೋಟೆ, ದೇವಿಕಾ ಪಿ. ಮಾದಳ್ಳಿ, ದಿನೇಶ್ ಕುಮಾರ್ ಆಳ್ವ ಉನ್ನತ ಶಿಕ್ಷಣ ಪರಿಷತ್ಗೆ ನೇಮಕಗೊಂಡವರು.