<p><strong>ಬೆಂಗಳೂರು</strong>: ಅಶೋಕ ನಗರದಲ್ಲಿರುವ ಹಾಸ್ಮಾಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು.</p>.<p>ಸಂಸ್ಥಾಪಕರಾದ ಡಾ.ಥಾಮಸ್ ಚಾಂಡಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅಲ್ಲದೇ ಮಗ್ರಾತ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಹೊಸ ಒಪಿಡಿ ವಿಭಾಗ ಪ್ರಾರಂಭಿಸಲಾಗಿದೆ.<br><br>ಸಂಸ್ಥಾಪಕರ ದಿನದ ಭಾಗವಾಗಿ ಜಿಬಿಎ ಸಹಯೋಗದಲ್ಲಿ ಮಗ್ರಾತ್ ರಸ್ತೆ, ವಿವೇಕನಗರ ಮತ್ತು ವಿಕ್ಟೋರಿಯಾ ಲೇಔಟ್ನಲ್ಲಿ ಒಂದು ವಾರ ಕಾಲ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಲಾಯಿತು.</p>.<p>ಆಸ್ಪತ್ರೆಯ ಮೇಕ್ ಮಿ ವಾಕ್ ಯೋಜನೆ ಮೂಲಕ ಯುವ ಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ಪ್ರಕಟಿಸಲಾಯಿತು. </p>.<p>‘ಥಾಮಸ್ ಚಾಂಡಿ ಅವರು ಜನಾನುರಾಗಿ ವೈದ್ಯರಾಗಿ ಸೇವೆ ಮಾಡಿದರು. ಸಂಸ್ಥೆಗಳನ್ನು ಕಟ್ಟಿದರೂ ವಾಣಿಜ್ಯ ನೆಲೆಯಲ್ಲಿ ಎಂದೂ ನೋಡಲಿಲ್ಲ. ಈಗ ಅವರ ಮಕ್ಕಳು ತಂದೆಯ ಪರಂಪರೆ ಮುಂದುವರೆಸಿದ್ದಾರೆ’ ಎಂದು ಗಣ್ಯರು ನೆನಪಿಸಿಕೊಂಡರು.</p>.<p>ಬೆಂಗಳೂರು ಪ್ರಾಂತ್ಯದ ಆರ್ಚ್ಬಿಷಪ್ ಪೀಟರ್ ಮಚಾಡೊ, ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್, ಈಜು ಪಟು ನಿಶಾ ಮಿಲೆಟ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನೀಶಾ ಚಾಂಡಿ ಎಕಾರ್ಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಶೋಕ ನಗರದಲ್ಲಿರುವ ಹಾಸ್ಮಾಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು.</p>.<p>ಸಂಸ್ಥಾಪಕರಾದ ಡಾ.ಥಾಮಸ್ ಚಾಂಡಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅಲ್ಲದೇ ಮಗ್ರಾತ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಹೊಸ ಒಪಿಡಿ ವಿಭಾಗ ಪ್ರಾರಂಭಿಸಲಾಗಿದೆ.<br><br>ಸಂಸ್ಥಾಪಕರ ದಿನದ ಭಾಗವಾಗಿ ಜಿಬಿಎ ಸಹಯೋಗದಲ್ಲಿ ಮಗ್ರಾತ್ ರಸ್ತೆ, ವಿವೇಕನಗರ ಮತ್ತು ವಿಕ್ಟೋರಿಯಾ ಲೇಔಟ್ನಲ್ಲಿ ಒಂದು ವಾರ ಕಾಲ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಲಾಯಿತು.</p>.<p>ಆಸ್ಪತ್ರೆಯ ಮೇಕ್ ಮಿ ವಾಕ್ ಯೋಜನೆ ಮೂಲಕ ಯುವ ಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ಪ್ರಕಟಿಸಲಾಯಿತು. </p>.<p>‘ಥಾಮಸ್ ಚಾಂಡಿ ಅವರು ಜನಾನುರಾಗಿ ವೈದ್ಯರಾಗಿ ಸೇವೆ ಮಾಡಿದರು. ಸಂಸ್ಥೆಗಳನ್ನು ಕಟ್ಟಿದರೂ ವಾಣಿಜ್ಯ ನೆಲೆಯಲ್ಲಿ ಎಂದೂ ನೋಡಲಿಲ್ಲ. ಈಗ ಅವರ ಮಕ್ಕಳು ತಂದೆಯ ಪರಂಪರೆ ಮುಂದುವರೆಸಿದ್ದಾರೆ’ ಎಂದು ಗಣ್ಯರು ನೆನಪಿಸಿಕೊಂಡರು.</p>.<p>ಬೆಂಗಳೂರು ಪ್ರಾಂತ್ಯದ ಆರ್ಚ್ಬಿಷಪ್ ಪೀಟರ್ ಮಚಾಡೊ, ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್, ಈಜು ಪಟು ನಿಶಾ ಮಿಲೆಟ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನೀಶಾ ಚಾಂಡಿ ಎಕಾರ್ಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>