ಹೊಯ್ಸಳ’. ಕನ್ನಡ ನಾಡನ್ನು ಆಳಿದ ರಾಜಮನೆತನದ ಹೆಸರು ಹೊಂದಿರುವ ಈ ಪೊಲೀಸ್ ಗಸ್ತುವಾಹನವನ್ನು ಬೆಂಗಳೂರಿನಲ್ಲಿ ನೋಡದವರೇ ಇಲ್ಲ. ಯಾವುದೇ ರೀತಿಯ ಸಂಕಷ್ಟದಲ್ಲಿದ್ದವರು ‘112’ ಸಂಖ್ಯೆಗೆ ಕರೆ ಮಾಡಿದರೆ ನೆರವಿಗೆ ಧಾವಿಸಿ ಬರುವ ಈ ವಾಹನದ ಸಿಬ್ಬಂದಿ, ಒಂದು ರೀತಿಯಲ್ಲಿ ಬೆಂಗಳೂರಿಗರ ಪಾಲಿಗೆ ಆಪದ್ಭಾಂಧವರಿದ್ದಂತೆ. ಈ ವಾಹನ ಹೇಗೆ ಕೆಲಸ ಮಾಡುತ್ತದೆ ? ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಗ್ರೌಂಡ್ ರಿಪೋರ್ಟ್ ಇದು.