<p><strong>ಬೆಂಗಳೂರು</strong>: ಗಗನಯಾನಿಯಾಗುವ ವಿದ್ಯಾರ್ಥಿಗಳಕನಸುಗಳಿಗೆ ರೆಕ್ಕೆ ಮೂಡಿಸುವಂತಹ ಬಾಹ್ಯಾಕಾಶ ಲೋಕದ ತಂತ್ರಜ್ಞಾನ ಪರಿಚಯಿಸುವ ಪ್ರದರ್ಶನ ಗಮನಸೆಳೆಯಿತು.</p>.<p>ಇಲ್ಲಿನಜವಾಹರಲಾಲ್ ನೆಹರೂ ತಾರಾಲಯ ಆವರಣದಲ್ಲಿಗುರುವಾರ ಆರಂಭವಾದ ‘ಮಾನವ ಆಂತರಿಕ್ಷ ಉಡಾವಣಾ ಪ್ರದರ್ಶನ’ದಲ್ಲಿ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಇಸ್ರೊ ಸಾಧನೆ, ಯೋಜನೆಗಳು ಮತ್ತು ಉಪಗ್ರಹಗಳ ಸಮಗ್ರಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.</p>.<p>ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನವುಜುಲೈ 24ರವರೆಗೆ ನಡೆಯಲಿದೆ.</p>.<p>ಗಗನಯಾನ ಯೋಜನೆಯ ಮಹತ್ವವನ್ನು ಪ್ರದರ್ಶನದಲ್ಲಿ ವಿವರಿಸಲಾಗಿದೆ.ಮಾನವಸಹಿತ ಬಾಹ್ಯಾಕಾಶ ನೌಕೆಯಲ್ಲಿ ತೆರಳುವ ಇಬ್ಬರು ಅಥವಾ ಮೂವರು ಗಗನಯಾನಿಗಳು 400 ಕಿಲೋ ಮೀಟರ್ ಕಕ್ಷೆಯಲ್ಲಿ 5 ಅಥವಾ 7 ದಿನಗಳ ವಾಸ್ತವ್ಯ ಹೂಡಿದ ಬಳಿಕ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆ ಇದಾಗಿದೆ.ಈ ಯೋಜನೆಗೆ ಬಳಸುವ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.</p>.<p>ಉಪಗ್ರಹಗಳ ಮಾದರಿಗಳ ಪ್ರದರ್ಶನವನ್ನು ಮಾಡಲಾಗಿದೆ. 1990ರಿಂದ ಇಲ್ಲಿಯವರೆಗಿನ ದೂರಸಂವೇದಿ ಉಪಗ್ರಹಗಳು ಮತ್ತು ಅವುಗಳ ಉಪಯೋಗ,ಜಿಸ್ಯಾಟ್31, ಜಿಸ್ಯಾಟ್–7ಎ ಸೇರಿದಂತೆ ಸಕ್ರಿಯ ಉಪಗ್ರಹಗಳು, ಸಂಪರ್ಕ ಉಪಗ್ರಹಗಳು, ಚಂದ್ರಯಾನ, ಮಂಗಳಯಾನ ಕುರಿತ ವಿವರಗಳನ್ನು ಇಲ್ಲಿ ನೀಡಲಾಗಿದೆ.</p>.<p>ಜಾಗತಿಕ ಮಾರುಕಟ್ಟೆ ಬೇಡಿಕೆಯಂತೆ ಸಣ್ಣ ಉಪಗ್ರಹಗಳ ಉಡಾವಣಾ ವಾಹಕಗಳನ್ನು (ಎಸ್ಎಸ್ಎಲ್ವಿ) ಇಸ್ರೊ ಅಭಿವೃದ್ಧಿಪಡಿಸುತ್ತಿದೆ. ಈ ಉಡಾವಣಾ ವಾಹಕಗಳು ಮಿನಿ, ಮೈಕ್ರೊ ಅಥವಾ ನ್ಯಾನೊ ಉಪಗ್ರಹಗಳನ್ನು (10ರಿಂದ 500 ಕೆ.ಜಿ.) 500 ಕಿ.ಮೀ. ಕಕ್ಷೆಯೊಳಗೆ ಸೇರಿಸುವ ಸಾಮರ್ಥ್ಯ ಹೊಂದಿರುವ ವಿವರ ಪ್ರದರ್ಶಿಸಲಾಗಿದೆ. ಜತೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರಿಗೆ ಅನುಕೂಲಗಳನ್ನು ವಿವರಿಸುವ ಫಲಕಗಳನ್ನು ಅಳವಡಿಸಲಾಗಿದೆ.</p>.<p>ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11ರಿಂದ 3 ಗಂಟೆಯವರೆಗೆ ಬಾಹ್ಯಾಕಾಶ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ಸಮಾಲೋಚನೆ ಹಾಗೂವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.</p>.<p>‘ಇಸ್ರೊ ಸಾಧನೆಯನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ. ಗಗನಯಾನಿಯಾಗಲು ಯಾವ ರೀತಿಯ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಉಪಗ್ರಹಗಳಿಂದಾಗುವ ಅನುಕೂಲ ವಿವರಿಸುವ ಪ್ರಯತ್ನ ಮಾಡಲಾಗಿದೆ’ ಎಂದುಮಾನವ ಆಂತರಿಕ್ಷ ಉಡಾವಣಾ ಕೇಂದ್ರದ ನಿರ್ದೇಶಕ ಡಾ. ಆರ್. ಉಮಾಮಹೇಶ್ವರನ್ ತಿಳಿಸಿದರು.</p>.<p class="Briefhead"><strong>‘ಗಗನಯಾನ ಯೋಜನೆಗೆ ಅಂತಿಮ ಹಂತದ ಸಿದ್ಧತೆ’</strong></p>.<p>‘ಇಸ್ರೊದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಹಲವಾರು ಸವಾಲುಗಳನ್ನು ಮೀರಿ ಯೋಜನೆಯನ್ನು ಯಶಸ್ವಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದುಮಾನವ ಅಂತರಿಕ್ಷ ಉಡಾವಣಾ ಕೇಂದ್ರದ (ಎಚ್ಎಸ್ಎಫ್ಸಿ) ನಿರ್ದೇಶಕ ಡಾ. ಆರ್. ಉಮಾಮಹೇಶ್ವರನ್ ತಿಳಿಸಿದರು.</p>.<p>‘ಈಗಾಗಲೇ ಗಗನಯಾತ್ರಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಗಗನಯಾನದ ವಿನ್ಯಾಸ ಪೂರ್ಣಗೊಳಿಸಲಾಗಿದೆ. ಹಲವು ರೀತಿಯ ಪರೀಕ್ಷೆಗಳನ್ನು ಸಹ ಕೈಗೊಳ್ಳಲಾಗಿದೆ. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕಾರ್ಯ ಸುಲಭವಲ್ಲ. ಇಲ್ಲಿ ಪ್ರತಿಯೊಂದು ಅಂಶವೂ ನಿಖರವಾಗಿರಬೇಕು’ ಎಂದು ವಿವರಿಸಿದರು.</p>.<p>ಇಸ್ರೊ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಎಸ್. ಸೋಮನಾಥ್ ಅವರು, ಕಳೆದ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಮಾಡಿದ ಸಾಧನೆಯನ್ನು ವಿವರಿಸಿದರು.</p>.<p>‘ಹೊಸ ಆವಿಷ್ಕಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಾಗಿದೆ. ಇನ್ನು ಮುಂದೆ ಚಂದ್ರಯಾನದಂತಹ ಯೋಜನೆಗಳು ನಿರಂತರವಾಗಿ ನಡೆಯಬಹುದು. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ’ ಎಂದರು.</p>.<p>‘ಭಾರತ ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಕೆಲವು ಕೊರತೆಗಳ ನಡುವೆಯೂ ಅಪಾರ ಪ್ರಗತಿ ಸಾಧಿಸಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಗಗನಯಾನಿಯಾಗುವ ವಿದ್ಯಾರ್ಥಿಗಳಕನಸುಗಳಿಗೆ ರೆಕ್ಕೆ ಮೂಡಿಸುವಂತಹ ಬಾಹ್ಯಾಕಾಶ ಲೋಕದ ತಂತ್ರಜ್ಞಾನ ಪರಿಚಯಿಸುವ ಪ್ರದರ್ಶನ ಗಮನಸೆಳೆಯಿತು.</p>.<p>ಇಲ್ಲಿನಜವಾಹರಲಾಲ್ ನೆಹರೂ ತಾರಾಲಯ ಆವರಣದಲ್ಲಿಗುರುವಾರ ಆರಂಭವಾದ ‘ಮಾನವ ಆಂತರಿಕ್ಷ ಉಡಾವಣಾ ಪ್ರದರ್ಶನ’ದಲ್ಲಿ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಇಸ್ರೊ ಸಾಧನೆ, ಯೋಜನೆಗಳು ಮತ್ತು ಉಪಗ್ರಹಗಳ ಸಮಗ್ರಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.</p>.<p>ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನವುಜುಲೈ 24ರವರೆಗೆ ನಡೆಯಲಿದೆ.</p>.<p>ಗಗನಯಾನ ಯೋಜನೆಯ ಮಹತ್ವವನ್ನು ಪ್ರದರ್ಶನದಲ್ಲಿ ವಿವರಿಸಲಾಗಿದೆ.ಮಾನವಸಹಿತ ಬಾಹ್ಯಾಕಾಶ ನೌಕೆಯಲ್ಲಿ ತೆರಳುವ ಇಬ್ಬರು ಅಥವಾ ಮೂವರು ಗಗನಯಾನಿಗಳು 400 ಕಿಲೋ ಮೀಟರ್ ಕಕ್ಷೆಯಲ್ಲಿ 5 ಅಥವಾ 7 ದಿನಗಳ ವಾಸ್ತವ್ಯ ಹೂಡಿದ ಬಳಿಕ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆ ಇದಾಗಿದೆ.ಈ ಯೋಜನೆಗೆ ಬಳಸುವ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.</p>.<p>ಉಪಗ್ರಹಗಳ ಮಾದರಿಗಳ ಪ್ರದರ್ಶನವನ್ನು ಮಾಡಲಾಗಿದೆ. 1990ರಿಂದ ಇಲ್ಲಿಯವರೆಗಿನ ದೂರಸಂವೇದಿ ಉಪಗ್ರಹಗಳು ಮತ್ತು ಅವುಗಳ ಉಪಯೋಗ,ಜಿಸ್ಯಾಟ್31, ಜಿಸ್ಯಾಟ್–7ಎ ಸೇರಿದಂತೆ ಸಕ್ರಿಯ ಉಪಗ್ರಹಗಳು, ಸಂಪರ್ಕ ಉಪಗ್ರಹಗಳು, ಚಂದ್ರಯಾನ, ಮಂಗಳಯಾನ ಕುರಿತ ವಿವರಗಳನ್ನು ಇಲ್ಲಿ ನೀಡಲಾಗಿದೆ.</p>.<p>ಜಾಗತಿಕ ಮಾರುಕಟ್ಟೆ ಬೇಡಿಕೆಯಂತೆ ಸಣ್ಣ ಉಪಗ್ರಹಗಳ ಉಡಾವಣಾ ವಾಹಕಗಳನ್ನು (ಎಸ್ಎಸ್ಎಲ್ವಿ) ಇಸ್ರೊ ಅಭಿವೃದ್ಧಿಪಡಿಸುತ್ತಿದೆ. ಈ ಉಡಾವಣಾ ವಾಹಕಗಳು ಮಿನಿ, ಮೈಕ್ರೊ ಅಥವಾ ನ್ಯಾನೊ ಉಪಗ್ರಹಗಳನ್ನು (10ರಿಂದ 500 ಕೆ.ಜಿ.) 500 ಕಿ.ಮೀ. ಕಕ್ಷೆಯೊಳಗೆ ಸೇರಿಸುವ ಸಾಮರ್ಥ್ಯ ಹೊಂದಿರುವ ವಿವರ ಪ್ರದರ್ಶಿಸಲಾಗಿದೆ. ಜತೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಜನಸಾಮಾನ್ಯರಿಗೆ ಅನುಕೂಲಗಳನ್ನು ವಿವರಿಸುವ ಫಲಕಗಳನ್ನು ಅಳವಡಿಸಲಾಗಿದೆ.</p>.<p>ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11ರಿಂದ 3 ಗಂಟೆಯವರೆಗೆ ಬಾಹ್ಯಾಕಾಶ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ಸಮಾಲೋಚನೆ ಹಾಗೂವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.</p>.<p>‘ಇಸ್ರೊ ಸಾಧನೆಯನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ. ಗಗನಯಾನಿಯಾಗಲು ಯಾವ ರೀತಿಯ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಉಪಗ್ರಹಗಳಿಂದಾಗುವ ಅನುಕೂಲ ವಿವರಿಸುವ ಪ್ರಯತ್ನ ಮಾಡಲಾಗಿದೆ’ ಎಂದುಮಾನವ ಆಂತರಿಕ್ಷ ಉಡಾವಣಾ ಕೇಂದ್ರದ ನಿರ್ದೇಶಕ ಡಾ. ಆರ್. ಉಮಾಮಹೇಶ್ವರನ್ ತಿಳಿಸಿದರು.</p>.<p class="Briefhead"><strong>‘ಗಗನಯಾನ ಯೋಜನೆಗೆ ಅಂತಿಮ ಹಂತದ ಸಿದ್ಧತೆ’</strong></p>.<p>‘ಇಸ್ರೊದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಹಲವಾರು ಸವಾಲುಗಳನ್ನು ಮೀರಿ ಯೋಜನೆಯನ್ನು ಯಶಸ್ವಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದುಮಾನವ ಅಂತರಿಕ್ಷ ಉಡಾವಣಾ ಕೇಂದ್ರದ (ಎಚ್ಎಸ್ಎಫ್ಸಿ) ನಿರ್ದೇಶಕ ಡಾ. ಆರ್. ಉಮಾಮಹೇಶ್ವರನ್ ತಿಳಿಸಿದರು.</p>.<p>‘ಈಗಾಗಲೇ ಗಗನಯಾತ್ರಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಗಗನಯಾನದ ವಿನ್ಯಾಸ ಪೂರ್ಣಗೊಳಿಸಲಾಗಿದೆ. ಹಲವು ರೀತಿಯ ಪರೀಕ್ಷೆಗಳನ್ನು ಸಹ ಕೈಗೊಳ್ಳಲಾಗಿದೆ. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕಾರ್ಯ ಸುಲಭವಲ್ಲ. ಇಲ್ಲಿ ಪ್ರತಿಯೊಂದು ಅಂಶವೂ ನಿಖರವಾಗಿರಬೇಕು’ ಎಂದು ವಿವರಿಸಿದರು.</p>.<p>ಇಸ್ರೊ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಎಸ್. ಸೋಮನಾಥ್ ಅವರು, ಕಳೆದ 75 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಮಾಡಿದ ಸಾಧನೆಯನ್ನು ವಿವರಿಸಿದರು.</p>.<p>‘ಹೊಸ ಆವಿಷ್ಕಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಾಗಿದೆ. ಇನ್ನು ಮುಂದೆ ಚಂದ್ರಯಾನದಂತಹ ಯೋಜನೆಗಳು ನಿರಂತರವಾಗಿ ನಡೆಯಬಹುದು. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ’ ಎಂದರು.</p>.<p>‘ಭಾರತ ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಕೆಲವು ಕೊರತೆಗಳ ನಡುವೆಯೂ ಅಪಾರ ಪ್ರಗತಿ ಸಾಧಿಸಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>