‘ನೀರಾವರಿ ಕ್ಷೇತ್ರಕ್ಕೆ ನಿಜಲಿಂಗಪ್ಪ ಅವರ ಕೊಡುಗೆ ಮಹತ್ವದ್ದು. ಕಾವೇರಿ, ಕೃಷ್ಣಾ ಯೋಜನೆಯ ಮೊದಲ ಚಿಂತಕರು ಮತ್ತು ರೂವಾರಿ ಅವರು. ಶಿಗ್ಗಾವಿಯಿಂದ ಆರಿಸಿ ಬಂದು ಅವರು ಮುಖ್ಯಮಂತ್ರಿ ಆಗಿದ್ದರು. ಅದೇ ಕ್ಷೇತ್ರವನ್ನು ಪ್ರತಿನಿಧಿಸಿ ಮುಖ್ಯಮಂತ್ರಿಯಾದ ಭಾಗ್ಯ ನನ್ನದು. ಅವರ ಜೀವನ ಆದರ್ಶ, ಉತ್ತಮ ಆಡಳಿತ ಇತರರಿಗೆ ಮಾದರಿ– ಮಾರ್ಗದರ್ಶಕ. ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದ ಅವರ ನಡೆಯನ್ನು ಪಾಲಿಸುವ ಸಂಕಲ್ಪವನ್ನು ಇಡೀ ಮಂತ್ರಿ ಮಂಡಳ ಮಾಡುವ ಅವಶ್ಯಕತೆ ಇದೆ’ ಎಂದರು.