<p><strong>ಬೆಂಗಳೂರು: </strong>ಶ್ವಾನಗಳಿಗೆ ಲಸಿಕೆ ಹಾಕಿಸಲಾಗಿದೆ ಎಂಬ ಪ್ರಮಾಣಪತ್ರ ತಂದಲ್ಲಿ ಮಾತ್ರ ಅವುಗಳಿಗೆ ಕಬ್ಬನ್ ಉದ್ಯಾನಕ್ಕೆ ಪ್ರವೇಶ ನೀಡುವ ನಿಯಮವನ್ನು ತೋಟಗಾರಿಕೆ ಇಲಾಖೆ ಜಾರಿ ಮಾಡಿದೆ.</p>.<p>ಉದ್ಯಾನಕ್ಕೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರು ತಮ್ಮೊಟ್ಟಿಗೆ ಶ್ವಾನಗಳನ್ನೂ ಕರೆತರುತ್ತಾರೆ. ಇದು ಇತರರಿಗೆ ಸಮಸ್ಯೆಯಾಗುತ್ತಿದೆ. ನಾಯಿಗಳು ಕಚ್ಚಬಹುದು ಎಂಬ ಭೀತಿಯಲ್ಲಿ ಉದ್ಯಾನದಲ್ಲಿ ಸಂಚರಿಸಬೇಕಾಗಿದೆ ಎಂದು ಕೆಲವರಿಂದ ದೂರು ಬಂದಿರುವುದರಿಂದ ಇಲಾಖೆ ಈ ನಿರ್ಧಾರ ಕೈಗೊಂಡಿದೆ.</p>.<p>ಎಲ್ಲ ಶ್ವಾನಗಳಿಗೂ ಕಡ್ಡಾಯವಾಗಿ ಮುಖಗವಸು ಹಾಕಬೇಕು. ಮಾಲೀಕರು ಶ್ವಾನಗಳನ್ನು ತಮ್ಮ ನಿಯಂತ್ರಣದಲ್ಲಿ ಇಡಬೇಕು. ಶ್ವಾನದೊಂದಿಗೆ ಆರೋಗ್ಯ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತು ವಿಧಿಸಿರುವ ಫಲಕಗಳನ್ನು ಇಲಾಖೆ ಉದ್ಯಾನದಲ್ಲಿ ಅಳವಡಿಸಿದೆ. ಉದ್ಯಾನದಲ್ಲಿ ಸಾಕು ನಾಯಿಗಳು ವಿಸರ್ಜಿಸುವ ಮಲ-ಮೂತ್ರದಿಂದಲೂ ಜನರಿಗೆ ಕಿರಿಕಿರಿಯಾಗುತ್ತಿದ್ದು, ಇದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯೂ ನೀಡಲಾಗಿದೆ.</p>.<p>'ಸಾಕು ನಾಯಿಗಳನ್ನು ಉದ್ಯಾನಕ್ಕೆ ಕರೆತರುವವರಿಗೆ ಈ ಹಿಂದೆಯೇ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದು ಜನರಿಗೆ ತಿಳಿಯುವಂತೆ ಈಗ ದೊಡ್ಡ ಫಲಕಗಳಲ್ಲಿ ಬರೆಸಲಾಗಿದೆ. ಇದು ಹೊಸದಾಗಿ ರೂಪಿಸಿರುವ ನಿಯಮಗಳಲ್ಲ' ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ.ಗುಣವಂತ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶ್ವಾನಗಳಿಗೆ ಲಸಿಕೆ ಹಾಕಿಸಲಾಗಿದೆ ಎಂಬ ಪ್ರಮಾಣಪತ್ರ ತಂದಲ್ಲಿ ಮಾತ್ರ ಅವುಗಳಿಗೆ ಕಬ್ಬನ್ ಉದ್ಯಾನಕ್ಕೆ ಪ್ರವೇಶ ನೀಡುವ ನಿಯಮವನ್ನು ತೋಟಗಾರಿಕೆ ಇಲಾಖೆ ಜಾರಿ ಮಾಡಿದೆ.</p>.<p>ಉದ್ಯಾನಕ್ಕೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರು ತಮ್ಮೊಟ್ಟಿಗೆ ಶ್ವಾನಗಳನ್ನೂ ಕರೆತರುತ್ತಾರೆ. ಇದು ಇತರರಿಗೆ ಸಮಸ್ಯೆಯಾಗುತ್ತಿದೆ. ನಾಯಿಗಳು ಕಚ್ಚಬಹುದು ಎಂಬ ಭೀತಿಯಲ್ಲಿ ಉದ್ಯಾನದಲ್ಲಿ ಸಂಚರಿಸಬೇಕಾಗಿದೆ ಎಂದು ಕೆಲವರಿಂದ ದೂರು ಬಂದಿರುವುದರಿಂದ ಇಲಾಖೆ ಈ ನಿರ್ಧಾರ ಕೈಗೊಂಡಿದೆ.</p>.<p>ಎಲ್ಲ ಶ್ವಾನಗಳಿಗೂ ಕಡ್ಡಾಯವಾಗಿ ಮುಖಗವಸು ಹಾಕಬೇಕು. ಮಾಲೀಕರು ಶ್ವಾನಗಳನ್ನು ತಮ್ಮ ನಿಯಂತ್ರಣದಲ್ಲಿ ಇಡಬೇಕು. ಶ್ವಾನದೊಂದಿಗೆ ಆರೋಗ್ಯ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತು ವಿಧಿಸಿರುವ ಫಲಕಗಳನ್ನು ಇಲಾಖೆ ಉದ್ಯಾನದಲ್ಲಿ ಅಳವಡಿಸಿದೆ. ಉದ್ಯಾನದಲ್ಲಿ ಸಾಕು ನಾಯಿಗಳು ವಿಸರ್ಜಿಸುವ ಮಲ-ಮೂತ್ರದಿಂದಲೂ ಜನರಿಗೆ ಕಿರಿಕಿರಿಯಾಗುತ್ತಿದ್ದು, ಇದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆಯೂ ನೀಡಲಾಗಿದೆ.</p>.<p>'ಸಾಕು ನಾಯಿಗಳನ್ನು ಉದ್ಯಾನಕ್ಕೆ ಕರೆತರುವವರಿಗೆ ಈ ಹಿಂದೆಯೇ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದು ಜನರಿಗೆ ತಿಳಿಯುವಂತೆ ಈಗ ದೊಡ್ಡ ಫಲಕಗಳಲ್ಲಿ ಬರೆಸಲಾಗಿದೆ. ಇದು ಹೊಸದಾಗಿ ರೂಪಿಸಿರುವ ನಿಯಮಗಳಲ್ಲ' ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ.ಗುಣವಂತ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>