ಬೆಂಗಳೂರು:ಕನ್ನಡ ವಿಜ್ಞಾನ ಜಾಲತಾಣ ‘ಇಜ್ಞಾನ’ದ 15ನೇ ವಾರ್ಷಿಕೋತ್ಸವದ ಅಂಗವಾಗಿ‘ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ’ ಕುರಿತ ವಿಚಾರ ಸಂಕಿರಣವನ್ನು ಇದೇ 7ರಂದು ಸುರಾನ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಕಾಲೇಜಿನ ಕನ್ನಡ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಕಾಡೆಮಿ ಸಿಇಒ ಎ.ಎಂ.ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್.ಭವಾನಿ, ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮ, ಉದಯ ಶಂಕರ ಪುರಾಣಿಕ ಭಾಗವಹಿಸಲಿದ್ದಾರೆ.