ಬಸವನಗುಡಿ, ಜಯನಗರ, ಶಂಕರಪುರ, ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಬೃಹತ್ ಪ್ರಮಾಣದ ಹಣಕಾಸು ಲೇವಾದೇವಿ ನಡೆಸುತ್ತಿರುವ ಉತ್ತರ ಭಾರತದ ಮೂಲದ ವರ್ತಕರ ಮನೆಗಳ ಮೇಲೆ ದಾಳಿ ಮಾಡಿದ್ದು, ಅವರ ಬಳಿ ಇದ್ದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಪುಲಕೇಶಿನಗರ ಮತ್ತು ಮಹಾಲಕ್ಷ್ಮಿಪುರದಲ್ಲೂ ಶೋಧ ನಡೆಸಿದ್ದು, ನಗದು ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.