ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಳ

Last Updated 16 ಏಪ್ರಿಲ್ 2021, 21:20 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಿರುವ ನಡುವೆ, ನಗರದಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಕೆಎಸ್‌ಆರ್‌ಟಿಸಿಯ 2,651, ಬಿಎಂಟಿಸಿಯ 873, ಎನ್‌ಇಕೆಆರ್ಟಿಸಿಯ 1,150 ಮತ್ತು ಎನ್‌ಡಬ್ಲ್ಯುಆರ್‌ಟಿಸಿಯ 956 ಬಸ್‌ಗಳು ಸೇರಿ ಶುಕ್ರವಾರ ಒಟ್ಟು 5,639ಬಸ್‌ಗಳು ಕಾರ್ಯಾಚರಣೆ ಮಾಡಿದವು. ಗುರುವಾರ4209 ಬಸ್‌ಗಳು ಕಾರ್ಯಾಚರಣೆ ಮಾಡಿದ್ದವು.

ಇದರ ನಡುವೆಯೂ ಖಾಸಗಿ ಬಸ್‌ಗಳ ದರ್ಬಾರ್ ಮುಂದುವರಿದಿದೆ. ಬಸ್‌ಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡುವುದು ಕೂಡ ಮುಂದುವರಿದಿತ್ತು. ಈ ನಡುವೆ ಬಿಎಂಟಿಸಿ ನೌಕರರ ಮೇಲಿನ ಕ್ರಮ ಕೂಡ ತೀವ್ರಗೊಂಡಿದೆ. ಒಟ್ಟಾರೆ 820 ಜನರನ್ನು ಬಿಎಂಟಿಸಿ ವಜಾಗೊಳಿಸಿದೆ. ಇದರಲ್ಲಿ ತರಬೇತಿ, ಪ್ರೊಬೇಷನರಿ ಅವಧಿಯ 580 ಸಿಬ್ಬಂದಿಯೂ ಇದ್ದಾರೆ. ಶುಕ್ರವಾರ ಇನ್ನೂ 232 ಮಂದಿಯನ್ನು ಅಮಾನತುಗೊಳಿಸಲಾಗಿದ್ದು, ಸದ್ಯ 727 ಮಂದಿ ಅಮಾನತಿನಲ್ಲಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಈವರೆಗೆ 85 ಮಂದಿ ವಜಾಗೊಂಡಿದ್ದಾರೆ. ಬೇರೆ ಮೂರು ನಿಗಮಗಳಿಗೆ ಹೋಲಿಸಿದರೆ ಬಿಎಂಟಿಸಿಯಲ್ಲೇ ಅತೀ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಕೂಟದಲ್ಲಿ ಬಿಎಂಟಿಸಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಷ್ಕರವನ್ನು ನೇರವಾಗಿ
ಬೆಂಬಲಿಸುತ್ತಿರುವ ನೌಕರರನ್ನು ಗುರುತಿಸಿ ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೌಕರರು ದೂರುತ್ತಾರೆ.

‘ಕೆಎಸ್‌ಆರ್‌ಟಿಸಿ ಸೇರಿ ಬೇರೆ ನಿಗಮಗಳಲ್ಲಿ ಗೈರಾದ ನೌಕರರನ್ನು ವರ್ಗಾವಣೆ ಮಾಡಲಾಗುತ್ತಿದೆ. ಬಿಎಂಟಿಸಿಯಲ್ಲಿ ವರ್ಗಾವಣೆ ಮಾಡಿದರೆ ಬೆಂಗಳೂರಿನಲ್ಲೇ ಬೇರೆ ಡಿಪೋ ಸಿಗಲಿದೆ. ಅದಕ್ಕೆ ನೌಕರರು ಹೆದರುವ ಸಾಧ್ಯತೆ ಇಲ್ಲ. ಹೀಗಾಗಿ, ಅಮಾನತು ಮತ್ತು ವಜಾ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT