<p><strong>ಬೆಂಗಳೂರು: </strong>ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಸ್ವಾಯತ್ತ ವಿದ್ಯಾಸಂಸ್ಥೆಯ 8ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು.</p>.<p>ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಅಂಗಸಂಸ್ಥೆಯಾದ ‘ದಿ ಸ್ಕೂಲ್ ಆಫ್ ರಾಯ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಜಿ. ಸತೀಶ್ ರೆಡ್ಡಿ ಮಾತನಾಡಿ, ‘ವಿದ್ಯಾರ್ಥಿಗಳು, ನೀವು ಯಾವ ಕುಟುಂಬದ ವಾತಾವರಣದಿಂದ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ. ಭವಿಷ್ಯದಲ್ಲಿ ಯಾವ ಸ್ಥಾನಕ್ಕೇರುತ್ತೀರಿ ಎನ್ನುವುದು ಮುಖ್ಯವಾಗಬೇಕು. ನಿಮ್ಮಲ್ಲಿರುವ ದೊಡ್ಡ ಕನಸುಗಳೇ ಭವಿಷ್ಯವನ್ನು ರೂಪಿಸಬಲ್ಲವು’ ಎಂದು ಹೇಳಿದರು.</p>.<p>‘ಯುವಜನಾಂಗವು ನವೋದ್ಯಮಗಳ ಕಡೆಗೆ ಹೆಚ್ಚು ಗಮನಹರಿಸಬೇಕು. ಆಗ ಸ್ವಾವಲಂಬನೆಗೆ, ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಜಗತ್ತಿನ ಪ್ರಸಿದ್ಧ ಕೌಶಲದಾರರಲ್ಲಿ ಶೇ 40ರಷ್ಟು ಮಂದಿ ಭಾರತೀಯರು’ ಎಂದು ತಿಳಿಸಿದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ‘ಕಲಿಕೆಗೆ ಪದವಿ ಹಂತವೇ ಕೊನೆಯಲ್ಲ. ನಿರಂತರ ಓದುವುದು, ಕಲಿಯುವುದನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ತೃಪ್ತಿ ಎನಿಸಿದರೆ ಅದರ ನಂತರ ಏನನ್ನೂ ಸಾಧಿಸಲು ಆಗುವುದಿಲ್ಲ’ ಎಂದು ವಿಶ್ಲೇಷಿಸಿದರು.</p>.<p>320 ಪದವಿ ವಿದ್ಯಾರ್ಥಿಗಳು ಮತ್ತು 80 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು. ಬಿಬಿಎ ವಿಭಾಗದಿಂದ ಸಲ್ಮಾ ಸುಲ್ತಾನಾ, ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. ಬಯೋಟೆಕ್ನಾಲಜಿ ವಿಭಾಗದಿಂದ ವಿನಿತಾ ಪ್ರಥಮ ರ್ಯಾಂಕ್ ಪಡೆದರು.</p>.<p>ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ. ಸೋಮಶೇಖರ್, ಕಾರ್ಯದರ್ಶಿ ಭಾರತಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಭಾರತಿ, ಉಪ ಪ್ರಾಂಶುಪಾಲ ಮೀನಾಚಿ ಸುಂದರಂ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಟಿ. ಶ್ರೀನಿವಾಸ ರಾವ್, ಸಂಶೋಧನ ವಿಭಾಗದ ನಿರ್ದೇಶಕ ದ್ವಾರಕನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಸ್ವಾಯತ್ತ ವಿದ್ಯಾಸಂಸ್ಥೆಯ 8ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು.</p>.<p>ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಅಂಗಸಂಸ್ಥೆಯಾದ ‘ದಿ ಸ್ಕೂಲ್ ಆಫ್ ರಾಯ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಜಿ. ಸತೀಶ್ ರೆಡ್ಡಿ ಮಾತನಾಡಿ, ‘ವಿದ್ಯಾರ್ಥಿಗಳು, ನೀವು ಯಾವ ಕುಟುಂಬದ ವಾತಾವರಣದಿಂದ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ. ಭವಿಷ್ಯದಲ್ಲಿ ಯಾವ ಸ್ಥಾನಕ್ಕೇರುತ್ತೀರಿ ಎನ್ನುವುದು ಮುಖ್ಯವಾಗಬೇಕು. ನಿಮ್ಮಲ್ಲಿರುವ ದೊಡ್ಡ ಕನಸುಗಳೇ ಭವಿಷ್ಯವನ್ನು ರೂಪಿಸಬಲ್ಲವು’ ಎಂದು ಹೇಳಿದರು.</p>.<p>‘ಯುವಜನಾಂಗವು ನವೋದ್ಯಮಗಳ ಕಡೆಗೆ ಹೆಚ್ಚು ಗಮನಹರಿಸಬೇಕು. ಆಗ ಸ್ವಾವಲಂಬನೆಗೆ, ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಜಗತ್ತಿನ ಪ್ರಸಿದ್ಧ ಕೌಶಲದಾರರಲ್ಲಿ ಶೇ 40ರಷ್ಟು ಮಂದಿ ಭಾರತೀಯರು’ ಎಂದು ತಿಳಿಸಿದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ, ‘ಕಲಿಕೆಗೆ ಪದವಿ ಹಂತವೇ ಕೊನೆಯಲ್ಲ. ನಿರಂತರ ಓದುವುದು, ಕಲಿಯುವುದನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ತೃಪ್ತಿ ಎನಿಸಿದರೆ ಅದರ ನಂತರ ಏನನ್ನೂ ಸಾಧಿಸಲು ಆಗುವುದಿಲ್ಲ’ ಎಂದು ವಿಶ್ಲೇಷಿಸಿದರು.</p>.<p>320 ಪದವಿ ವಿದ್ಯಾರ್ಥಿಗಳು ಮತ್ತು 80 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು. ಬಿಬಿಎ ವಿಭಾಗದಿಂದ ಸಲ್ಮಾ ಸುಲ್ತಾನಾ, ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. ಬಯೋಟೆಕ್ನಾಲಜಿ ವಿಭಾಗದಿಂದ ವಿನಿತಾ ಪ್ರಥಮ ರ್ಯಾಂಕ್ ಪಡೆದರು.</p>.<p>ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ. ಸೋಮಶೇಖರ್, ಕಾರ್ಯದರ್ಶಿ ಭಾರತಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಭಾರತಿ, ಉಪ ಪ್ರಾಂಶುಪಾಲ ಮೀನಾಚಿ ಸುಂದರಂ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಟಿ. ಶ್ರೀನಿವಾಸ ರಾವ್, ಸಂಶೋಧನ ವಿಭಾಗದ ನಿರ್ದೇಶಕ ದ್ವಾರಕನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>