‘ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಿರುವ ಇಲಾಖೆ, ಕೇಂದ್ರೀಕೃತ ಸಂಸ್ಕರಣಾ ಘಟಕ (ಸಿಪಿಸಿ) ಸ್ಥಾಪಿಸಿದೆ. ಈ ಘಟಕದ ದತ್ತಾಂಶ ನಿರ್ವಹಣೆ ಸಂಬಂಧ ಇನ್ಫೊಸಿಸ್ ಕಂಪನಿ ಜೊತೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯಡಿಯಲ್ಲೇ ಇನ್ಫೋಸಿಸ್ ಉದ್ಯೋಗಿ ರೇಣುಕಾಕುಂಟ ಕಲ್ಯಾಣಕುಮಾರ್ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.