<p><strong>ಹೆಸರಘಟ್ಟ</strong>: ಮೈಸೂರು ರಾಜರಾದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಗೆ ಸಂಬಂಧಿಸಿದ ಶಿಲಾಶಾಸನವೊಂದು ಅರಕೆರೆ ಗ್ರಾಮದ ದೊಡ್ಡಕೆರೆ ಪೂರ್ವದಲ್ಲಿರುವ ಸಿಹಿನೀರಿನ ಬಾವಿಯ ಬಳಿ ಪತ್ತೆಯಾಗಿದೆ.</p>.<p>ಮಣ್ಣಿನಲ್ಲಿ ಅರ್ಧ ಹೂತು ಹೋಗಿದ್ದ ಶಾಸನವನ್ನು ಗ್ರಾಮದ ನಿವಾಸಿಯಾದ ನಾಗರಾಜಗೌಡ, ಇತಿಹಾಸ ತಜ್ಞರಾದ ಕೆ.ಆರ್.ನರಸಿಂಹನ್ ಹಾಗೂ ಕೆ.ಧನಪಾಲ್ ತಂಡವು ಹೊರ ತೆಗೆದು ರಕ್ಷಿಸುವ ಕೆಲಸ ಮಾಡಿದೆ. ಶಿಲಾಶಾಸನದಲ್ಲಿ ಒಟ್ಟು ಹನ್ನೆರಡು ಸಾಲುಗಳಿದ್ದು, 2 ಅಡಿ ಅಗಲ ಮತ್ತು 1.8 ಅಡಿ ಉದ್ದವಿದೆ. ’ಶಿಲಾಶಾಸನದಲ್ಲಿ 1750 ನೇ ಶುಕ್ಲ ಸಂವತ್ಸರದ ಫಾಲ್ಗುಣ ಎನ್ನುವ ಮಾಹಿತಿ ಇದೆ. ಶಿಲಾ ಶಾಸನದ ಕಲ್ಲು ತುಂಡಾಗಿರುವುದರಿಂದ ಮಾಹಿತಿ ಅಪೂರ್ಣವಾಗಿದೆ‘ ಎಂದು ಕೆ.ಆರ್.ನರಸಿಂಹನ್ ಅವರು ಹೇಳಿದರು.</p>.<p>‘ಕಲ್ಲು ಪೂರ್ಣವಾಗಿ ಲಭ್ಯವಾಗಿದ್ದರೆ ಬಹುಶಃ ಗ್ರಾಮದ ಬಗ್ಗೆ ಒಂದಿಷ್ಟು ಮಾಹಿತಿ ದೊರಕುತ್ತಿತ್ತು. 1750ರಲ್ಲಿ ಬಹುಶಃ ಈ ಗ್ರಾಮವು ಒಡೆಯರ್ ಆಳ್ವಿಕೆಗೆ ಒಳ ಪಟ್ಟಿರಬೇಕು. ಕಲ್ಲಿನ ತುಂಡಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದೇವೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ</strong>: ಮೈಸೂರು ರಾಜರಾದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಗೆ ಸಂಬಂಧಿಸಿದ ಶಿಲಾಶಾಸನವೊಂದು ಅರಕೆರೆ ಗ್ರಾಮದ ದೊಡ್ಡಕೆರೆ ಪೂರ್ವದಲ್ಲಿರುವ ಸಿಹಿನೀರಿನ ಬಾವಿಯ ಬಳಿ ಪತ್ತೆಯಾಗಿದೆ.</p>.<p>ಮಣ್ಣಿನಲ್ಲಿ ಅರ್ಧ ಹೂತು ಹೋಗಿದ್ದ ಶಾಸನವನ್ನು ಗ್ರಾಮದ ನಿವಾಸಿಯಾದ ನಾಗರಾಜಗೌಡ, ಇತಿಹಾಸ ತಜ್ಞರಾದ ಕೆ.ಆರ್.ನರಸಿಂಹನ್ ಹಾಗೂ ಕೆ.ಧನಪಾಲ್ ತಂಡವು ಹೊರ ತೆಗೆದು ರಕ್ಷಿಸುವ ಕೆಲಸ ಮಾಡಿದೆ. ಶಿಲಾಶಾಸನದಲ್ಲಿ ಒಟ್ಟು ಹನ್ನೆರಡು ಸಾಲುಗಳಿದ್ದು, 2 ಅಡಿ ಅಗಲ ಮತ್ತು 1.8 ಅಡಿ ಉದ್ದವಿದೆ. ’ಶಿಲಾಶಾಸನದಲ್ಲಿ 1750 ನೇ ಶುಕ್ಲ ಸಂವತ್ಸರದ ಫಾಲ್ಗುಣ ಎನ್ನುವ ಮಾಹಿತಿ ಇದೆ. ಶಿಲಾ ಶಾಸನದ ಕಲ್ಲು ತುಂಡಾಗಿರುವುದರಿಂದ ಮಾಹಿತಿ ಅಪೂರ್ಣವಾಗಿದೆ‘ ಎಂದು ಕೆ.ಆರ್.ನರಸಿಂಹನ್ ಅವರು ಹೇಳಿದರು.</p>.<p>‘ಕಲ್ಲು ಪೂರ್ಣವಾಗಿ ಲಭ್ಯವಾಗಿದ್ದರೆ ಬಹುಶಃ ಗ್ರಾಮದ ಬಗ್ಗೆ ಒಂದಿಷ್ಟು ಮಾಹಿತಿ ದೊರಕುತ್ತಿತ್ತು. 1750ರಲ್ಲಿ ಬಹುಶಃ ಈ ಗ್ರಾಮವು ಒಡೆಯರ್ ಆಳ್ವಿಕೆಗೆ ಒಳ ಪಟ್ಟಿರಬೇಕು. ಕಲ್ಲಿನ ತುಂಡಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದೇವೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>